Advertisement

ಫಿರೋಜಾಬಾದ್‌ ದರ್ಶನ-ಅಧ್ಯಯನ

10:58 AM Nov 26, 2019 | Suhan S |

ಕಲಬುರಗಿ: ವಿಶ್ವಪರಂಪರೆ ಸಪ್ತಾಹ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸರಕಾರಿ ವಸ್ತು ಸಂಗ್ರಹಾಲಯ ಹಾಗೂ ಇನ್‌ ಟ್ಯಾಕ್‌ ಅಧ್ಯಯನಗಳ ಸಂಯುಕ್ತ ಆಶ್ರಯದಲ್ಲಿ ಫಿರೋಜಾಬಾದ್‌ ದರ್ಶನ ಕಾರ್ಯಕ್ರಮವನ್ನು ಫಿರೋಜಾಬಾದ್‌ ಕೋಟೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

Advertisement

ಇತಿಹಾಸ ಪ್ರಾಧ್ಯಾಪಕ ಹಾಗೂ ಸಂಶೋಧಕರಾದ ಡಾ| ಶಂಭುಲಿಂಗ ಎಸ್‌. ವಾಣಿ ಉಪನ್ಯಾಸ ನೀಡಿ, ಫಿರೋಜಾಬಾದ್‌ಬಹಮನಿ ಸುಲ್ತಾನರ ಮೂರನೇ ರಾಜಧಾನಿ ಪಟ್ಟಣ. ಫಿರೋಜ್‌ ಶಹಾ ಬಹಮನಿಯು ಕ್ರಿ.ಶ. 1406ರಲ್ಲಿ ವಿಜಯನಗರದ ಮೇಲೆ ದಂಡಯಾತ್ರೆ ಮುಗಿಸಿಕೊಂಡು ಬರುವಾಗ ಅವನ ಸೈನ್ಯ ಹಾಗೂ ಸುಲ್ತಾನನು ಭೀಮಾ ನದಿಯ ದಂಡೆಯ ಮೇಲೆ ಕೆಲಕಾಲ ತಂಗಿತು. ಆಗ ಸುಲ್ತಾನನಿಗೆ ಇದು ಅತ್ಯಂತ ಸೂಕ್ತ ಮತ್ತು ಆಕರ್ಷಿಕ ಸ್ಥಳವಾಗಿ ಕಂಡುಬಂದಿತು ಎಂದು ವಿವರಿಸಿದರು.

ಕಲಬುರಗಿ ಕೋಟೆ ವಿಸ್ತಾರಗೊಳಿಸಲು ಸಾಧ್ಯವಿಲ್ಲದಿದ್ದಾಗ ಮತ್ತು ಕುದುರೆಗಳಿಗೆ, ಆನೆಗಳಿಗೆ ವಿಶಾಲ ಸ್ಥಳ ಹಾಗೂ ಕುಡಿಯಲು ನೀರಿನ ಅನುಕೂಲಕ್ಕಾಗಿ ಮತ್ತು ರಾಜ್ಯಕ್ಕೆ ನದಿಯಿಂದ ರಕ್ಷಣೆ ದೊರೆಯುತ್ತಿದೆ ಎನ್ನುವ ಹಲವು ಕಾರಣಗಳಿಗೆ ಹೊಸ ರಾಜಧಾನಿಯ ನಿರ್ಮಾಣ ಕಾರ್ಯ ಆರಂಭಗೊಂಡಿತು.ಮುಂದಿನ 8-10 ವರ್ಷಗಳಲ್ಲಿ ವಿಶಾಲವಾದ ಕೋಟೆ, ನಾಲ್ಕು ದಿಕ್ಕಿನಲ್ಲಿ ಬೃಹತ್‌ ಪ್ರಮಾಣದ ಪ್ರವೇಶ ದ್ವಾರಗಳು, ಮೂರು ಅಂತಸ್ತಿನ ಅರಮನೆ, ವಿಶಾಲವಾದ ಜಾಮಿ ಮಸೀದಿ, ಸಭಾ ಭವನ, ಸುಲ್ತಾನರ ವಿಶ್ರಾಂತಿ ಸ್ಥಳಗಳು, ಸೈನಿಕರಿಗೆ, ಆನೆಗಳಿಗೆ ಹಾಗೂ ಕುದುರೆಗಳಿಗೆ ವಿಶೇಷ ಸ್ಥಳಾವಕಾಶವನ್ನು ಫಿರೋಜ್‌ ಶಹಾ ಈ ಕೋಟೆಯ ಒಳಭಾಗದಲ್ಲಿ ಕಲ್ಪಿಸಿಕೊಟ್ಟಿರುವುದನ್ನು ವಿವರಿಸಿದರು. ಫಿರೋಜಾಬಾದ್‌ ಕೋಟೆಯ ಪ್ರವೇಶಕ್ಕೆ ಯಾವುದೇ ಸೂಕ್ತ ಪ್ರವೇಶ ದ್ವಾರಗಳು ಅಥವಾ ರಸ್ತೆಗಳು ಇರುವುದಿಲ್ಲ. ಇಡಿ ಕೋಟೆಯ ಆವರಣದ ಭೂಮಿಯನ್ನು ಕೃಷಿಗೆ ಅಳವಡಿಸಲಾಗಿದ್ದು, ಇದರ ಕಲ್ಲುಗಳು ಹೊಲಕ್ಕೆ ರಕ್ಷಣೆಗೆ ಬಳಸಿಕೊಂಡಿದ್ದು, ಪ್ರಮುಖ ದ್ವಾರಗಳ ಮುಂಭಾಗದಲ್ಲಿ ತಂತಿಯ ಬೇಲಿ ಹಾಕಿ ಪ್ರವೇಶಕ್ಕೆ ಅಡ್ಡಿ ಮಾಡಲಾಗಿದೆ. ಒಳಭಾಗದ ಕಟ್ಟಡಗಳನ್ನು ನಾಶಗೊಳಿಸುವ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಕಂಡುಬರುತ್ತದೆ. ನಿಧಿಯ ಆಸೆಗಾಗಿ ಕಟ್ಟಡಗಳನ್ನು ನೆಲಸಮಗೊಳಿಸುವ ಚಟುವಟಿಕೆ ನಡೆಯುತ್ತಿದೆ. ಈ ರೀತಿಯ ಚಟುವಟಿಕೆಗಳು ಹಾಗೆ ಮುಂದುವರೆದರೆ ಮುಂದಿನ ಕೆಲವೇ ದಶಕಗಳಲ್ಲಿ ಕೋಟೆ ಸಂಪೂರ್ಣವಾಗಿ ನಾಶಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವಸ್ತು ಸಂಗ್ರಹಾಲಯ ಇಲಾಖೆಯ ಅನ್ವೇಷಕ ಶಬ್ಬೀರ್‌ ಅಹಮ್ಮದ್‌, ಸರಕಾರಿ (ಸ್ವಾಯತ್ತ) ಕಾಲೇಜು ಸ್ನಾತಕೋತ್ತರ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ|ಟಿ.ವಿ.ಅಡಿವೇಶ, ಪ್ರೊ| ಚಂದ್ರಶೇಖರ ಅನಾದಿ, ಸರಕಾರಿ ಮಹಿಳಾ ಕಾಲೇಜು ಸ್ನಾತಕೋತ್ತರ ಇತಿಹಾಸ ವಿಭಾಗದ ಮುಖ್ಯಸ್ಥ ಡಾ| ಶಶಿಶೇಖರ ರೆಡ್ಡಿ, ಡಾ| ಭೀಮಣ್ಣ ಘನಾತೆ, ಪ್ರೊ| ಶರಣಪ್ಪ ಗುಂಡಗುರ್ತಿ, ಪ್ರೊ| ರವಿಕುಮಾರ, ಸಂಶೋಧನಾರ್ಥಿಗಳು, ಎರಡು ಕಾಲೇಜುಗಳ ಸ್ನಾತಕೋತ್ತರ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next