Advertisement

ಹಿಟ್ಲರ್ ನಂತೆ ಮೋದಿ-ಶಾ ಆತ್ಮಹತ್ಯೆ ಮಾಡಿಕೊಳ್ಳುವ ಕಾಲ ಸನ್ನಿಹಿತ: ಮಾಜಿ ಶಾಸಕ ಸೇಠ್ ಅರೋಪ

09:53 AM Dec 18, 2019 | keerthan |

ಬೆಳಗಾವಿ: ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪೌರತ್ವ ಕಾಯ್ದೆ ಜಾರಿಗೆ ತಂದು ನಮ್ಮನ್ನು ಹತ್ತಿಕ್ಕಲು ಷಡ್ಯಂತ್ರ ರೂಪಿಸಿದ್ದಾರೆ. ಹಿಟ್ಲರ್ ಆಡಳಿತ ನಡೆಸುತ್ತಿರುವ ಅವರು ಇನ್ನು ಮುಂದೆ ಹಿಟ್ಲರ್ ನಂತೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಕಾಲ ಬರಲಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಫಿರೋಜ್ ಸೇಠ್ ಗಂಭೀರ ಆರೋಪ ಮಾಡಿದರು.

Advertisement

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಖಂಡಿಸಿ ನಗರದಲ್ಲಿ ಮುಸ್ಲಿಂ ಸಮುದಾಯದವರು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನಾವು ಹಿಂದೂಸ್ಥಾನಿ ಅಲ್ಲ ಅಂತ ಹೇಳುವವರಿಗೆ ಅವರನ್ನೇ ಭಾರತದಿಂದ ಕಿತ್ತು ಹೊರಗೆ ಹಾಕಲಾಗುವುದು. ಈ ಹೋರಾಟ ಈಗ ಆರಂಭಗೊಂಡಿದೆ. ಈ ಪಿಶಾಚಿಗಳಿಂದ ನಮಗೆ ಸ್ವಾತಂತ್ರ್ಯ ಸಿಗೋವರೆಗೂ ನಾವು ಈ ಚಳವಳಿ ಮುಂದುವರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next