Advertisement

ಅನೈತಿಕ ಸಂಬಂಧಕ್ಕಾಗಿ ಮರ್ಡರ್‌ ಮಾಡಿದ್ದ ಆರೋಪಿಯ ಮೇಲೆ ಫೈರಿಂಗ್‌

09:23 AM May 27, 2019 | Vishnu Das |

ಬೆಂಗಳೂರು : ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಪತಿಯನ್ನು ಹತ್ಯೆಗೈದಿದ್ದ ಆರೋಪಿಯ ಮೇಲೆ ಪೊಲೀಸ್‌ ಫೈರಿಂಗ್‌ ನಡೆಸಿದ ಘಟನೆ ಪೀಣ್ಯ ಇಂಡಸ್ಟ್ರೀಯಲ್‌ ಏರಿಯಾದಲ್ಲಿ ನಡೆದಿದೆ.

Advertisement

ಕಿಶೋರ್‌ ಎಂಬ ಆರೋಪಿ ಉಮೇಶ್‌ ಎನ್ನುವವರನ್ನು ಹತ್ಯೆಗೈದು ತಲೆ ಮರೆಸಿಕೊಂಡಿದ್ದ. ರಾಜಗೋಪಾಲ ನಗರ ಪೊಲೀಸರು ಕಾರ್ಯಾಚರಣೆಗಿಳಿದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ದಿನೇಶ್‌ ಪಾಟೀಲ್‌ ಅವರು ಕಿಶೋರ್‌ ಕಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿ ಕಿಶೋರ್‌ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹತ್ಯೆಗೀಡಾದ ಉಮೇಶ್‌ ಅವರ ಪತ್ನಿ ರೂಪಾ ಜೊತೆ ಆರೋಪಿ ಕಿಶೋರ್‌ ಅನೈತಿಕ ಸಂಬಂಧ ಹೊಂದಿದ್ದಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next