Advertisement

ಉತ್ಸವದ ವೇಳೆ ಪಟಾಕಿ ದುರಂತ; 21 ರ ಯುವತಿ ದಾರುಣ ಸಾವು 

09:31 AM Dec 03, 2018 | |

ತಿಪಟೂರು:ಇಲ್ಲಿ ಭಾನುವಾರ ತಡರಾತ್ರಿ ನಡೆದ ಪಟಾಕಿ ದುರಂತದಲ್ಲಿ 21 ವರ್ಷ ಪ್ರಾಯದ ಯುವತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

Advertisement

ಗಣೇಶೋತ್ಸವದ ಸಂಭ್ರಮದ ವೇಳೆ ಭಾರೀ ಪ್ರಮಾಣದಲ್ಲಿ ಸುಡುಮದ್ದನ್ನು ಸಿಡಿಸಲಾಗುತ್ತಿತ್ತು. ಈ ವೇಳೆ ಪಟಾಕಿಯೊಂದು ಸಿತಾರಾ ಎನ್ನುವ ಯುವತಿಯ ತಲೆಯ ಮೇಲೆ ಬಿದ್ದು ಸಿಡಿದಿದೆ. 

ಗಂಭೀರವಾಗಿ ಗಾಯಗೊಂಡ ಸಿತಾರಾರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸಿತಾರಾ ತುರುವೇಕೆರೆ ಅಮ್ಮಸಂದ್ರದ ರಾಜಣ್ಣ ಎನ್ನುವವರ ಪುತ್ರಿ.

ತಿಪಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next