Advertisement

ಪೂರಂನಲ್ಲಿ ಪಟಾಕಿಗೆ ಅನುಮತಿ

12:26 AM Apr 12, 2019 | mahesh |

ಹೊಸದಿಲ್ಲಿ: ಕೇರಳದ ತಿರುವಂಬಾಡಿ ದೇವಸ್ವಂ ಹಾಗೂ ಪರಮೆಕ್ಕಾವು ದೇವಸ್ವಂನಲ್ಲಿ ತ್ರಿಶೂರು ಪೂರಂ ಹಬ್ಬದ ವೇಳೆ ಪಟಾಕಿ ಸಿಡಿಸಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ಮೇ 7ರಿಂದ 14 ವರೆಗೆ ನಡೆಯ ಲಿರುವ ಈ ಹಬ್ಬ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಈ ಹಬ್ಬದ ಮೂಲ ಆಶಯವೇ ಪಟಾಕಿ ಹಚ್ಚುವುದು ಎಂಬುದಾಗಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ ಹಬ್ಬವನ್ನು ನಿಷೇಧಿಸಲು ಯಾವುದೇ ಕಾರಣವಿಲ್ಲ ಎಂದೂ ಕೋರ್ಟ್‌ ಹೇಳಿದೆ. ಆದರೆ ಈಗಾಗಲೇ ಪಟಾಕಿ ತಯಾರಿಕೆ ನಿಷೇಧಿಸಿರುವುದರಿಂದ, ಈ ಹಬ್ಬದ ಪ್ರಯುಕ್ತ ಪಟಾಕಿ ತಯಾರಿಸಲು ಅನುಮತಿ ನೀಡು ವಂತೆ ತಯಾರಕರು ಅರ್ಜಿ ಸಲ್ಲಿಸಬೇಕಾಗಿದೆ.

Advertisement

ಹಸಿರು ಪಟಾಕಿಗೆ ಅಸ್ತು: ಮತ್ತೂಂದೆಡೆ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆ (ಪೆಸ್ಕೋ) ರೂಪಿಸಿರುವ “ಹಸಿರು ಪಟಾಕಿ’ (ಗ್ರೀನ್‌ ಕ್ರಾಕರ್ಸ್‌) ಸೂತ್ರಕ್ಕೆ ಒಪ್ಪಿಗೆ ನೀಡಿರುವ ಸುಪ್ರೀಂ, ಪರಿಸರ ಸ್ನೇಹಿ ಪಟಾಕಿ ಉತ್ಪಾದನೆಗೆ ಅನುವು ಮಾಡಿಕೊಡಬೇಕೆಂದು ಸರಕಾರಕ್ಕೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next