Advertisement

ಕೊಟ್ಟಿಗೆಗೆ ಬೆಂಕಿ: ಅಪಾರ ಹಾನಿ

05:19 PM May 12, 2019 | pallavi |

ಜೋಯಿಡಾ: ಸಮೀಪದ ಸಂತರಿ ಗ್ರಾಮದ ಪಕ್ಕದ ಜಾಮಗಾಳಿ ಮಜರೆಯ ರತ್ನಾಕರ್‌ ಸಾವಂತ ಎಂಬ ರೈತನ ದನದ ಕೊಟ್ಟಿಗೆಗೆ ಶನಿವಾರ ರಾತ್ರಿ ಬೆಂಕಿ ಬಿದ್ದ ಪರಿಣಾಮ ಕೊಟ್ಟಿಗೆ ಸಂಪೂರ್ಣ ಸುಟ್ಟುಹೋಗಿದ್ದು, ಅಗ್ನಿಶಾಮಕ ದಳದ ಸಮಯೋಚಿತ ಕರ್ತವ್ಯದಿಂದ ಅಪಾರ ಹಾನಿ ತಪ್ಪಿದೆ. ಸಂಜೆ ಸಮಯದಲ್ಲಿ ಹೊತ್ತಿಕೊಂಡ ಬೆಂಕಿ ಸಂಪೂರ್ಣ ಕೊಟ್ಟಿಗೆಯನ್ನು ಆವರಿಸಿತ್ತು. ನಂತರ ಅಲ್ಲಿಗೆ ಬಂದ ಅಗ್ನಿಶಾಮಕ ದಳದವರು ಬೆಂಕಿ ನಿಂದಿಸುವ ಮೂಲಕ ಅಪಾರ ಹಾನಿ ಸಂಭವಿಸುವುದನ್ನು ತಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಕೊಟ್ಟಿಗೆ ಒಳಗಿರುವ ಸುಮರು 30000 ರೂ.ಗೂ ಹೆಚ್ಚು ಮೌಲ್ಯದ ಒಣಮೇವು ಸುಟ್ಟಿದ್ದು, ಮೆಲ್ಛಾವಣಿ ಸುಟ್ಟು, ಕೊಟ್ಟಿಗೆಗೆ ಹಾಕಿದ ಕಟ್ಟಿಗೆ ಸಾಮಗ್ರಿ, ಇನ್ನಿತರ ವಸ್ತುಗಳು ಬೆಂಕಿಗೆ ತಗುಲಿ ಹಾನಿಗೊಳಗಾಗಿದ್ದು ವರದಿಯಾಗಿದೆ.

Advertisement

ಅಗ್ನಿಶಾಮಕ ಅಧಿಕಾರಿಗಳಾದ ಎಎಸ್‌ಒ ನವೀನ, ಪ್ರ.ಅ. ಶಾಮಕರಾದ ರವಿಕಾಂತ ನಾಯ್ಕ, ಸಂತೋಷ ರಾಮದುರ್ಗ, ಶಿವಕುಮಾರ ಗುರವ, ಚಾಲಕ ಶಿವಾನಂದ ಹುಗ್ಗಿನವರ ಅಗ್ನಿಶಮನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next