Advertisement

ಬೀಫ್ ಸ್ಟಾಲ್‌ಗ‌ಳಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಯ ಬಂಧನ

02:25 AM Jan 17, 2021 | Team Udayavani |

ಮಂಗಳೂರು: ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ಜ. 8ರ ರಾತ್ರಿ ಬೀಫ್ ಸ್ಟಾಲ್‌ಗ‌ಳಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಒಳಪೇಟೆಯ ಬಾಡಿಗೆ ಮನೆ ನಿವಾಸಿ ನಾಗರಾಜ್‌ (39) ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕಬ್ಬಿಣದ ಕೆಲಸ, ಕೂಲಿ ಕೆಲಸ ಮಾಡುತ್ತಿರುವ ನಾಗರಾಜ್‌ ಒಂದು ವಾರದಿಂದ  ಬೀಫ್ ಸ್ಟಾಲ್‌ಗ‌ಳಿಂದ ಮಾಂಸ ಖರೀದಿಸಿ ಸ್ನೇಹಿತ ಲತೀಫ್ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ. ಒಮ್ಮೆ ಸ್ಟಾಲ್‌ನಲ್ಲಿ 300 ರೂ. ಮಾಂಸ ಖರೀದಿಸಿ ಹೆಚ್ಚುವರಿ ಮಾಂಸ ಕೊಡುವಂತೆ ಅಂಗಡಿಯವನಲ್ಲಿ ಕೇಳಿದ. ಅಂಗಡಿಯವನು ಬೈದು ಕಳುಹಿಸಿದ್ದ. ಇದರಿಂದ ತನಗೆ ಅವಮಾನವಾಯಿತು ಎಂದು ಭಾವಿಸಿ ರಾತ್ರಿ ಸೀಮೆಎಣ್ಣೆ ಹಾಕಿ ಸ್ಟಾಲ್‌ಗೆ ಬೆಂಕಿ ಹಚ್ಚಿದ. ಬಳಿಕ ಮನೆಗೆ ಹೋಗಿ ತಾಯಿಗೆ ವಿಷಯ ತಿಳಿಸಿದ. “ಕುಡಿದು ಬಂದು ಏನೋ ಮಾತನಾಡುತ್ತೀಯ’ ಎಂದು ತಾಯಿ ಬೈದು ಸುಮ್ಮನಾಗಿದ್ದರು. ಮರುದಿನ ಘಟನೆ ಬೆಳಕಿಗೆ ಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು ಎಂದು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next