Advertisement

ಸಿದ್ದೇಶ್ವರ ಸಕ್ಕರೆ ಕಾರ್ಖಾನೆ ಪ್ಲಾಂಟ್‌ಗೆ ಬೆಂಕಿ

04:23 PM May 12, 2017 | Team Udayavani |

ಸೊಲ್ಲಾಪುರ: ಜಿಲ್ಲೆಯ ರೈತರ ಜೀವನಾಡಿಯಾದ ಶ್ರೀ ಸಿದ್ದೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಡಿಸ್ಟಿಲರಿ ಪ್ಲಾಂಟ್‌ಗೆ ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ಹತ್ತಿದ್ದರಿಂದ ಬೆಲೆಬಾಳುವ ವಸ್ತುಗಳು ಸುಟ್ಟಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ. 

Advertisement

ಹೋಟಗಿ ರಸ್ತೆಯಲ್ಲಿರುವ ಸಿದ್ದೇಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ರೌದ್ರರೂಪ ತಾಳಿತ್ತು. ಆದರೆ ಸ್ಥಳಕ್ಕೆ ಆಗಮಿಸಿದ್ದ ಐದು ಅಗ್ನಿಶಾಮಕ ದಳದ ಅಧಿಧಿಕಾರಿಗಳ ಪ್ರಯತ್ನದಿಂದ ಬೆಂಕಿ ಹತೋಟಿಗೆ ತರಲಾಯಿತು. ಕೋ – ಜನರೇಶನ್‌ ವಿಭಾಗದಲ್ಲಿ 100 ಅಡಿ ಎತ್ತರದ ಟವರ್‌ ಮೇಲೆ ಕನ್ವೇನರ್‌ ಮಶಿನ್‌ ಕೂಡ್ರಿಸುವ ಕಾರ್ಯ ನಡೆದಿತ್ತು.

ವೆಲ್ಡಿಂಗ್‌ ಮಾಡುವಾಗ ಒಣಗಿದ ಹುಲ್ಲಿನ ಮೇಲೆ ಬಿದ್ದ ಬೆಂಕಿಯಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಡಿಸ್ಟಿಲರಿ ವಿಭಾಗದ ವೈರ್‌ ಡ್ರಮ್‌ ಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಅಧಿಕಾರಿಗಳು ಬೆಂಕಿ ಬಯೋಗ್ಯಾಸ್‌ ಕಡೆಗೆ ಹೋಗದಂತೆ ತಡೆದಿದ್ದಾರೆ ಎಂದು ಕಾರ್ಖಾನೆ ಅಧ್ಯಕ್ಷ ಧರ್ಮರಾಜ ಕಾಡಾದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next