Advertisement

ಜಮೀನಿಗೆ ಬೆಂಕಿ: ಅಪಾರ ನಷ್ಟ

11:31 AM Mar 15, 2019 | Team Udayavani |

ತರೀಕೆರೆ: ಜಮೀನೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಬೆಳೆ ಮತ್ತು ಕೃಷಿ ಪರಿಕರ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಅರಸೀಕೆರೆ ಗ್ರಾಮದ ಬಳಿ ಗುರುವಾರ ಮಧ್ಯಾಹ್ನ 1:30ರ ಸುಮಾರಿಗೆ ನಡೆದಿದೆ.

Advertisement

ಗ್ರಾಮದ ಜಯಣ್ಣ ಎಂಬವವರಿಗೆ ಸೇರಿದ ಜಮೀನಿನಲ್ಲಿ ಬೆಂಕಿ ತಗುಲಿ ಅಡಿಕೆ ಗಿಡಗಳು, ಸೋಲಾರ್‌ ಪರಿಕರಗಳು, ಪಿವಿಸಿ ಪೈಪ್‌ಗ್ಳು, ಜಾನುವಾರುಗಳ ಕೊಟ್ಟಿಗೆ ಮತ್ತು ಕೇಬಲ್‌ಗ‌ಳು ನಾಶವಾಗಿವೆ. ಬೆಂಕಿ ಪಕ್ಕದ ರೈತ ದಾಸಾನಾಯ್ಕ ಎಂಬುವವರ ಜಮೀನಿಗೂ ಹಬ್ಬಿದ್ದು, 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸಿಲ್ವರ್‌ ಮತ್ತು ಹೆಬ್ಬೇವು ಗಿಡಗಳೂ ಸಹ ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next