Advertisement

ದುಷ್ಕರ್ಮಿಗಳ ಅಟ್ಟಹಾಸ: ಮೇವಿನ ಹುಲ್ಲು ತಾಗಿದ್ದಕ್ಕೆ ಲಾರಿಗೆ ಬೆಂಕಿ

09:10 AM Mar 18, 2017 | Team Udayavani |

ನೆಲಮಂಗಲ: ಇಲ್ಲಿನ ಮುದ್ದಲಿಂಗ ನಹಳ್ಳಿ ರೈಲ್ವೇ ಗೇಟ್‌ ಬಳಿ ಗೋವುಗಳಿಗೆ ತರಲಾಗುತ್ತಿದ್ದ ಮೇವಿನ ಲಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. 

Advertisement

ಲಾರಿಯಲ್ಲಿ ತುಂಬಲಾಗಿದ್ದ ಹುಲ್ಲು ಟಾಟಾ ಏಸ್‌ ವಾಹನಕ್ಕೆ ತಾಗಿತು ಎನ್ನುವ ಕ್ಷುಲ್ಲಕ ಕಾರಣಕ್ಕೆ ಲಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ಬೆಂಕಿ ತಗುಲುತ್ತಿದ್ದಂತೆ ಚಾಲಕ ಮತ್ತು ಸಹಾಯಕ ಲಾರಿಯಿಂದ ಜಿಗಿದು ಪಾರಾಗಿದ್ದಾರೆ. ಲಾರಿ ಸಂಪೂರ್ಣವಾಗಿ ಭಸ್ಮವಾಗಿದೆ. 

ತೀವ್ರ ಬರದ ಹಿನ್ನಲೆಯಲ್ಲಿ  ಆಂಧ್ರದಿಂದ ಹುಲ್ಲನ್ನು  ಸರ್ಕಾರದ ವತಿಯಿಂದ ರೈತರಿಗೆ ವಿತರಿಸಲು ತರಲಾಗುತ್ತಿತ್ತು. 

ತ್ಯಾಮಗೊಂಡ್ಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next