Advertisement

Mangaluru: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸಾವು

08:48 PM May 09, 2024 | Team Udayavani |

ಮಂಗಳೂರು: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕಂಕನಾಡಿ ನಾಗುರಿ ಬಳಿ ಗುರುವಾರ ಸಂಜೆ ಸಂಭವಿಸಿದೆ.

Advertisement

ಎಕ್ಕೂರು ನಿವಾಸಿ ಹರ್ಷನ್‌(17) ಮೃತಪಟ್ಟವರು. ಕೀರ್ತನ್‌(17) ಮತ್ತು ಕಿಶೋರ್‌(18) ಗಾಯಗೊಂಡವರು. ಇವರು ಮೂವರು ಕೂಡ ಒಂದೇ ಸ್ಕೂಟರ್‌ನಲ್ಲಿ ಪಡೀಲ್‌ ಕಡೆಯಿಂದ ಪಂಪ್‌ವೆಲ್‌ ಕಡೆಗೆ ಹೋಗುತ್ತಿದ್ದರು. ನಾಗುರಿ ಅಳಪೆ ನಡುವೆ ಹೆದ್ದಾರಿಯಲ್ಲಿ ಸ್ಕೂಟರ್‌ ಮಗುಚಿ ಬಿತ್ತು. ಸ್ಕೂಟರ್‌ನಲ್ಲಿದ್ದವರು ರಸ್ತೆಗೆ ಎಸೆಯಲ್ಪಟ್ಟರು.ಆಗ ಹರ್ಷನ್‌ ಮೇಲೆ ಟಿಪ್ಪರ್‌ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಗರದ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಚಾರ ನಿಯಮ ಉಲ್ಲಂಘನೆ ಹೆಚ್ಚಳ :

ನಗರ ವ್ಯಾಪ್ತಿಯಲ್ಲಿ ಅತೀವೇಗ, ನಿರ್ಲಕ್ಷ್ಯದ ಚಾಲನೆ, ಅಪ್ರಾಪ್ತ ವಯಸ್ಸಿನ ಬಾಲಕರಿಂದ ವಾಹನ ಚಾಲನೆ ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆ ಹೆಚ್ಚುತ್ತಿರುವ ಜತೆಗೆ ಅಪಘಾತಗಳ ಸಂಖ್ಯೆಯೂ ಏರುತ್ತಲೇ ಇದ್ದು ಆತಂಕ ಮೂಡಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next