Advertisement

ಬಟ್ಟೆ ಅಂಗಡಿಗೆ ಬೆಂಕಿ

05:28 PM Jan 25, 2022 | Shwetha M |

ಆಲಮೇಲ: ಪಟ್ಟಣದ ಬಟ್ಟೆ ಅಂಗಡಿಯೊಂದು ವಿದ್ಯುತ್‌ ಶಾರ್ಟ್‌ ಸರ್ಕ್ನೂಟನಿಂದ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

Advertisement

ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದ ಕೇದರನಾಥ ಗುರುರಾಜ ಧನಶ್ರೀ ಅವರಿಗೆ ಸೇರಿದ ಬಟ್ಟೆ ಅಂಗಡಿಯಲ್ಲಿ ರವಿವಾರ ರಾತ್ರಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ತಗುಲಿ 20 ಲಕ್ಷ ರೂ.ಗೂ ಅಧಿಕ ಪ್ರಮಾಣದ ಬೆಲೆ ಬಾಳುವ ಬಟ್ಟೆಗಳು ಸುಟ್ಟು ಕರಕಲಾಗಿವೆ.

ಅಂಗಡಿಯ ಮಾಲಿಕ ಪ್ರತಿನಿತ್ಯದಂತೆ ವಹಿವಾಟು ಮುಗಿಸಿಕೊಂಡು ಮನೆಗೆ ತೆರಳಿದ್ದಾರೆ. ಕೆಲವೆ ಹೊತ್ತಿನಲ್ಲಿ ಬೆಂಕಿ ಲಗುಲಿದ್ದು ಹೊಗೆ ಕಾಣಿಸಿಕೊಂಡ ತಕ್ಷಣ ಅಕ್ಕ ಪಕ್ಕದ ನಿವಾಸಿಗಳು ತಮ್ಮ ಮನೆಯಿಂದ ನೀರು ತಂದು ಸುರಿದು ಪಕ್ಕದ ಅಂಗಡಿಗೂ ವ್ಯಾಪಿಸಬಹುದಾದ ಬೆಂಕಿ ಅನಾಹುತವನ್ನು ತಪ್ಪಿಸಿದ್ದಾರೆ. ನಂತರ ಹೆಸ್ಕಾಂ ಕಚೇರಿಗೆ ಮಾಹಿತಿ ನೀಡಿ ವಿದ್ಯುತ್‌ ಸ್ಥಗಿತಗೊಳಸಿ ಸಂಪೂರ್ಣ ಬೆಂಕಿ ನಂದಿಸಿದ್ದಾರೆ. ಈ ಕುರಿತು ಆಲಮೇಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next