Advertisement

ದುಷ್ಕರ್ಮಿಗಳಿಂದ ಮತ್ತೆ ಎಂಟು ಕಾರಿಗೆ ಬೆಂಕಿ

06:30 AM Jan 15, 2018 | Team Udayavani |

ಕಲಬುರಗಿ: ನಗರದ ಬನಶಂಕರಿ ಕಾಲೋನಿ, ವಿಶ್ವೇಶ್ವರಯ್ಯ ಕಾಲೋನಿ, ಜಯನಗರ, ಯುನೈಟೆಡ್‌ ಆಸ್ಪತ್ರೆ ಹಾಗೂ ಲಾಲಗೇರಿ ಕ್ರಾಸ್‌ನಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

Advertisement

ನೇತ್ರಜ್ಯೋತಿ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ. ಅಜಯ್‌ ಅವರ ಕಾರಿಗೆ ಬೆಂಕಿ ಇಟ್ಟು ಕಿಡಿಗೇಡಿಗಳು ಹೋಗುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಚಿತ್ರಿತವಾಗಿವೆ. ಇದರಿಂದ ಇವುಗಳನ್ನುಯಾರು ಮಾಡುತ್ತಿದ್ದಾರೆ. ಯಾಕೆ ಮಾಡಲಾಗುತ್ತಿದೆ ಎನ್ನುವುದು ಬಯಲಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇಡಂ ರಸ್ತೆಯ ಬನಶಂಕರಿ ಕಾಲೋನಿಯಲ್ಲಿ, ವಿಶ್ವೇಶ್ವರಯ್ಯ ಕಾಲೋನಿಯಲ್ಲಿ 1, ಜಯನಗರದಲ್ಲಿ 2,ಯುನೈಟೆಡ್‌ ಆಸ್ಪತ್ರೆಯ ಬಳಿ 1, ಲಾಲಗೇರಿ ಕ್ರಾಸ್‌ನಲ್ಲಿ 1 ಕಾರು ಸೇರಿ ಸುಮಾರು 8ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಕೆಲವು ಕಾರುಗಳಿಗೆ ಹಾನಿಯನ್ನು ಮಾಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಎನ್‌. ಶಶಿಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಂ.ಬಿ.ನಗರ, ರಾಘವೇಂದ್ರ ನಗರ ಹಾಗೂ ಸ್ಟೇಷನ್‌ ಬಜಾರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next