Advertisement
ಗ್ರಾಮಿಣ ಪ್ರದೇಶವಾಗಿರುವ ಕಾರಣದಿಂದ ಈ ಭಾಗದ ಜನರು ಕಡಬ ಪೇಟೆಯ ಕಡೆಗೆ ಬರಲು ಜೀಪು ಮತ್ತು ಮಿನಿ ಪ್ರಯಾಣಿಕ ವಾಹನಗಳನ್ನೇ ಹೆಚ್ಚಾಗಿ ಅವಲಂಬಿಸಿರುತ್ತಾರೆ. ಹಾಗೆಯೇ ಇಂದೂ ಸಹ ಕಲ್ಲುಗುಡ್ಡೆ ಎಂಬ ಪ್ರದೇಶದಿಂದ ಕಡಬ ಕಡೆಗೆ ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದ ಟಾಟಾ ಮ್ಯಾಜಿಕ್ ಐರಿಸ್ ವಾಹನವು ಮುಳಿಮಜಲು ಎಂಬ ಪ್ರದೇಶಕ್ಕೆ ತಲುಪಿದಾಗ ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಸೂಚನೆ ಸಿಕ್ಕಿದೆ, ತಕ್ಷಣವೇ ಚಾಲಕ ವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸಿದ್ದಾರೆ. ಬಳಿಕ ಪ್ರಯಾಣಿಕರನ್ನೆಲ್ಲ ಇಳಿಸುತ್ತಿದ್ದಂತೆಯೇ ವಾಹನದಲ್ಲಿ ಕಾಣಿಸಿಕೊಂಡ ಬೆಂಕಿ ದೊಡ್ಡದಾಗುತ್ತಾ ಪೂರ್ತಿ ವಾಹನವನ್ನೇ ಆವರಿಸಿಕೊಂಡಿದೆ. ವಾಹನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದೇ ಬೆಂಕಿ ಕಾಣಿಸಿಕೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ಅಪಾಯವೊಂದು ತಪ್ಪಿದಂತಾಗಿದೆ.