Advertisement

ಮಾಕಳಿ ಬೆಟ್ಟದ ತಪ್ಪಲಿನಲ್ಲಿ ಬೆಂಕಿ: ಅರಣ್ಯ ನಾಶ

12:58 PM Mar 05, 2022 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಮಾಕಳಿ ಬೆಟ್ಟದ ಸಾಲಿಗೆ ಶುಕ್ರವಾರ ಮಧ್ಯಾಹ್ನ ಕಿಡಿಗೇಡಿಗಳು ಹತ್ತಿಸಿದಬೆಂಕಿಯಿಂದಾಗಿ ಅಮೂಲ್ಯ ಸಸ್ಯ ಸಂಪತ್ತು, ಸಣ್ಣ ಪುಟ್ಟಪ್ರಾಣಿ, ಪಕ್ಷಿಗಳು ಹಾಗೂ ಮರಗಳು ಬೆಂಕಿಗೆ ಸುಟ್ಟು ಭಸ್ಮವಾಗುತ್ತಿದೆ.

Advertisement

ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬಿಸಿಲಿನ ತಾಪ ಹಾಗೂ ಒಣಗಿದ ಹುಲ್ಲಿನ ಕಾರಣ ಬೆಂಕಿಅರಣ್ಯಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಬೆಂಕಿಯಹಡುವಿಕೆಯಿಂದಾಗಿ ಹೊಸಹಳ್ಳಿ – ದೊಡ್ಡಬಳ್ಳಾಪುರ ನಡುವಿನ ವಾಹನ ಸವಾರರು ತತ್ತರಿಸುವಂತಾಗಿದೆ.

ಬೇಸಿಗೆಯ ಬಿಸಿಲಿನಿಂದ ಒಣಗಿರುವ ಹುಲ್ಲನ್ನುದನಕರುಗಳು ಮೇಯುವುದಿಲ್ಲ, ಮಳೆಗಾಲದಲ್ಲಿ ಹೊಸಹುಲ್ಲು ಬರಲೆಂದು ಕಿಡಿಗೇಡಿಗಳು ಇಡುವ ಬೆಂಕಿಯ ಕಿಡಿಯಿಂದ ನೂರಾರು ಎಕರೆ ಕಾಡು ನಾಶವಾಗುತ್ತಿದೆ. ಈ ಅರಣ್ಯ ಪ್ರದೇಶಗಳಲ್ಲಿ ನೂರಾರು ನವಿಲುಗಳು, ಚಿರತೆ, ಜಿಂಕೆ, ತೋಳ, ನರಿ, ಕಾಡುಹಂದಿ, ಮೊಲಗಳು, ನೂರಾರುಬಗೆಯ ಪಕ್ಷಿಗಳು ವಾಸಿಸುತ್ತಿವೆ.

ಇದರಿಂದ ಕಾಡು ಪ್ರಾಣಿಗಳಿಗೆ ನೆರಳು ಮತ್ತು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಪರಿಸರಾಸಕ್ತರು ಒತ್ತಾಯಿಸಿದ್ದಾರೆ. ತಾಲೂಕಿನ ಮಾಕಳಿ ಬೆಟ್ಟ ಸಾಲಿಗೆ ಬೆಂಕಿ ಹರಡಿದ ಸುದ್ದಿತಿಳಿಯುತ್ತಿದ್ದಂತೆಯೇ ಬೆಂಕಿಯನ್ನು ನಂದಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next