Advertisement

ದೆಹಲಿಯಲ್ಲಿ ಮತ್ತೊಂದು ಅಗ್ನಿ ಅವಘಡ: ಹೊತ್ತಿ ಉರಿದ ಪೀಠೋಪಕರಣಗಳ ಮಾರುಕಟ್ಟೆ

10:06 AM Dec 11, 2019 | Team Udayavani |

ಹೊಸದಿಲ್ಲಿ:  ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಅಗ್ನಿ ಅವಘಡ ನಡೆದಿದೆ. ಇಲ್ಲಿನ ಕಿರಾರಿ ಪ್ರದೇಶದಲ್ಲಿ ಪೀಠೋಪಕರಣಗಳ ಮಾರುಕಟ್ಟೆಗೆ ಬೆಂಕಿ ತಗುಲಿದೆ.

Advertisement

ಮಂಗಳವಾರ ಬೆಳಿಗ್ಗೆ ಈ ಅಗ್ನಿ ಅನಾಹುತ ನಡೆದಿದ್ದು, ಇದುವರೆಗೆ ಯಾವುದೇ ಸಾವು ನೋವು ವರದಿಯಾಗಿಲ್ಲ. ಸುಮಾರು ಎಂಟು ಅಗ್ನಿ ಶಾಮಕ ದಳ ವಾಹನದ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ.

ದೆಹಲಿಯ ಅನಾಜ್ ಮಂಡಿ ಪ್ರದೇಶದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಈ ಭೀಕರ ಘಟನೆಯಲ್ಲಿ ಸುಮಾರು 43 ಜನರು ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next