Advertisement

ಅಗ್ನಿ ಆಕಸ್ಮಿಕ: ಬೆಂಕಿ ಕೆನ್ನಾಲಿಗೆಗೆ ಗುಡಿಸಲು ಭಸ್ಮ

10:04 AM Feb 10, 2020 | keerthan |

ರಾಯಚೂರು:  ಆಕಸ್ಮಿಕ ಅಗ್ನಿ ಅವಘಡದಲ್ಲಿ ಗುಡಿಸಲೊಂದು ಸಂಪೂರ್ಣ ಭಸ್ಮವಾಗಿದ್ದು, ಪಕ್ಕದ ಮನೆಗೂ ಬೆಂಕಿ ತಗುಲಿ ಹಾನಿ ಉಂಟಾದ ಘಟನೆ ರಾಯಚೂರು ತಾಲೂಕಿನ ಯರಗುಂಟಾ ಗ್ರಾಮದಲ್ಲಿ ನಡೆದಿದೆ.

Advertisement

ಶನಿವಾರ ಸಂಜೆ ಈ ಅವಘಡ ನಡೆದಿದ್ದು, ಗ್ರಾಮದ ಸಣ್ಣ ಈರೇಶ ಎನ್ನುವವರ ಗುಡಿಸಲಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ನಡೆದಿದೆ ಎನ್ನಲಾಗಿದೆ.

ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬಟ್ಟೆ, ಟಿವಿ, ಫ್ರಿಡ್ಜ್ ಸೇರಿದಂತೆ ಸಾಕಷ್ಟು ವಸ್ತುಗಳು ಸುಟ್ಟು ಕರಕಲಾಗಿವೆ. ಬೆಂಕಿ ಜ್ವಾಲೆ ಪಕ್ಕದಲ್ಲಿದ್ದ ಗೋಪಾಲ ಎನ್ನುವವರು ಮನೆಗೂ ವ್ಯಾಪಿಸಿ ದಿನಬಳಕೆ ವಸ್ತುಗಳು ಭಸ್ಮಗೊಂಡಿವೆ.

ಸ್ಥಳಕ್ಕೆ ಧಾವಿಸಿದ ರಾಯಚೂರು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next