Advertisement
ಸಂಜೆ 6 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು ಅರ್ಧ ಗಂಟೆ ಹೊತ್ತಿ ಉರಿದಿದೆ. ಈ ವೇಳೆಗೆ ಕೆಲ ಎಕರೆ ಪ್ರದೇಶಗಳಷ್ಟು ಬೆಂಕಿ ಕೆನ್ನಾಲಿಗೆ ವ್ಯಾಪಿಸಿಕೊಂಡಿದ್ದು, ಈ ಭಾಗದಲ್ಲಿನ ಔಷಧಿ ಸಸ್ಯಗಳು ಹಾಗೂ ಜೀವ, ಜಂತುಗಳು ಬೆಂಕಿಗಾಹುತಿಯಾಗಿವೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಮುಂಡರಗಿ ಆರ್ಎಫ್ಒ ಮಹಾಂತೇಶ ನ್ಯಾಮತಿ, ಡೋಣಿ ಬಳಿ ಕೇವಲ ಒಂದೆರಡು ಎಕರೆ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಈ ಬಗ್ಗೆ ಮಾಹಿತಿ ಲಭ್ಯವಾದ 10 ನಿಮಿಷದಲ್ಲಿ ಇಲಾಖೆಯ ಸ್ಕ್ವಾಡ್ಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದ್ದಾರೆ.
Advertisement
ಕಪ್ಪತಗುಡ್ಡಕ್ಕೆ ಮತ್ತೆ ಬೆಂಕಿ
11:04 AM Feb 07, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.