Advertisement

ಹನೂರು: ಬಿಆರ್ ಟಿ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ: 30 ಎಕರೆಗೂ ಹೆಚ್ಚು ಅರಣ್ಯ ಭಸ್ಮ

10:30 PM Mar 18, 2022 | Team Udayavani |

ಹನೂರು (ಚಾಮರಾಜನಗರ ): ಬಿಆರ್ ಟಿ ಅರಣ್ಯ ಪ್ರದೇಶದ  ಬೈಲೂರು ವನ್ಯಜೀವಿ ವಲಯದ ಕೆರೆದಿಂಬ  ಸೋಲಿಗರ ಪೋಡಿನ ಸುತ್ತಮುತ್ತ ಪ್ರದೇಶಕ್ಕೆ ಬೆಂಕಿ ತಗುಲಿ ಸುಮಾರು ಮೂವತ್ತು  (30) ಎಕರೆಗೂ ಹೆಚ್ಚು ಅರಣ್ಯ ಭಸ್ಮವಾಗಿದೆ.

Advertisement

ಬಿಆರ್ ಟಿ ಅರಣ್ಯ ವಲಯ ವ್ಯಾಪ್ತಿಯ ಕೆರೆದಿಂಬ ಬೆಟ್ಟದ ತುತ್ತತುದಿಯಲ್ಲಿ  ಸಂಜೆ 5 : 30 ರ ಸಮಯದಲ್ಲಿ  ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ  ಅರಣ್ಯ ಅಧಿಕಾರಿಗಳು ಯಳಂದೂರು, ಕೊಳ್ಳೇಗಾಲ , ಬೈಲೂರು  ವಲಯ ವ್ಯಾಪ್ತಿಯ ಸಿಬ್ಬಂದಿ  ಆರ್. ಎಫ್ .ಒ ಶಿವರಾಜ್ ಮತ್ತು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಅಪಾರ ಪ್ರಾಮಾಣದ ಗಾಳಿ ಬಿಸುವುದರಿಂದ ಬೆಂಕಿಯು ಮತ್ತಷ್ಟು ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next