Advertisement

ಬೆಂಕಿ ತಗುಲಿ ಮನೆ ಭಸ್ಮ: 12 ಲ.ರೂ. ನಷ್ಟ

02:11 AM Jul 11, 2019 | Sriram |

ಮಂಗಳೂರು: ನಗರದ ತಾರೆತೋಟದಲ್ಲಿ ಮಂಗಳವಾರ ತಡ ರಾತ್ರಿ ಬೆಂಕಿತಗುಲಿ ಮನೆಯೊಂದು ಸಂಪೂರ್ಣ ಸುಟ್ಟು ಹೋಗಿದೆ.

Advertisement

ತಾರೆತೋಟದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ವಿಕ್ಟೋ ರಿಯಾ ಮಸ್ಕರೇನ್ಹಸ್‌ (41) ಅವರು ಬಾಡಿಗೆಗೆ ವಾಸವಿದ್ದ ಹಂಚಿನ ಮನೆ ರಾತ್ರಿ 12 ಗಂಟೆ ಸುಮಾರಿಗೆ ಬೆಂಕಿಗಾಹುತಿಯಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ.

ವಿಕ್ಟೋರಿಯಾ ಮಸ್ಕರೇನ್ಹಸ್‌ ಮತ್ತು ಅವರ ಇಬ್ಬರು ಪುತ್ರಿಯರು ಸಂಜೆ 7.30ರ ವೇಳೆಗೆ ಬಿಕರ್ನಕಟ್ಟೆ ಚರ್ಚ್‌ ಗೆ ತೆರಳಿದ್ದು, ಅಲ್ಲಿಂದ ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ 12.30ರ ವೇಳೆಗೆ ಅವರು ಬಂದಾಗ ಮನೆ ಸಂಪೂರ್ಣ ಸುಟ್ಟು ಹೋಗಿತ್ತು.

ಇದು ಹಳೆಯ ಹಂಚಿನ ಮನೆಯಾಗಿದ್ದು, ಬೆಂಕಿಯಿಂದಾಗಿ ಮನೆಯ ಒಳಗಿದ್ದ ಎಲ್ಲ ವಸ್ತುಗಳು ಸುಟ್ಟು ಹೋಗಿವೆ. ಮಾಡಿನ ಪಕ್ಕಾಸು, ರೀಪು ಕೂಡ ಭಸ್ಮವಾಗಿದೆ.

ಬೆಂಕಿಯನ್ನು ಗಮನಿಸಿದ ಪಕ್ಕದ ಮನೆಯವರು ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದರು. ಅಗ್ನಿ ಶಾಮಕ ದಳದ ಸಿಬಂದಿ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿದರು. ಕದ್ರಿ ಪೊಲೀಸರು ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು.

Advertisement

12 ಲ. ರೂ.ನಷ್ಟ
ಬೆಂಕಿ ದುರತದಿಂದ ಮನೆಯ ಕಟ್ಟಡ ಮತ್ತು ಒಳಗಿದ್ದ ಸೊತ್ತುಗಳೆಲ್ಲವೂ ಸುಟ್ಟು ಹೋಗಿದ್ದು, ಸುಮಾರು 12 ಲ.ರೂ. ನಷ್ಟ ಅಂದಾಜಿಸಲಾಗಿದೆ ಎಂದು ವಿಕ್ಟೋರಿಯಾ ಅವರು ಕದ್ರಿ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್ನಿಂದ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next