Advertisement

ಕೆರೆಕಾಡು ತ್ಯಾಜ್ಯ ಸಂಗ್ರಹ ರಾಶಿಗೆ ಬೆಂಕಿ

10:57 PM Jan 13, 2021 | Team Udayavani |

ಹಳೆಯಂಗಡಿ : ಪಡುಪಣಂಬೂರು ಗ್ರಾಮ ಪಂಚಾಯತ್‌ನ ಬೆಳ್ಳಾಯರು ಕೆರೆಕಾಡಿನ ತ್ಯಾಜ್ಯ ಸಂಗ್ರಹ ರಾಶಿಗೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಆವರಿಸಿದ್ದು, ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನ ಪಟ್ಟಿದ್ದಾರೆ.

Advertisement

ಹಿಂದೂ ರುದ್ರಭೂಮಿಯ ಸಮೀಪದಲ್ಲಿ ಪಂಚಾಯತ್‌ನ ಈ ತ್ಯಾಜ್ಯ ಸಂಗ್ರಹದ ಕೇಂದ್ರವಿದ್ದು, ಅದರ ಹತ್ತಿರದಲ್ಲಿಯೇ ಪಂಚಾಯತ್ ಸದಸ್ಯರಾದ ತುಳಸಿ ಅವರ ಮನೆಯಿದೆ.  ಹಲವು ಸಮಯಗಳಿಂದ ಇಲ್ಲಿ ರಸ್ತೆ ಪಕ್ಕದಲ್ಲಿಯೇ ಇರುವ ಈ ತ್ಯಾಜ್ಯ ರಾಶಿಯ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ಸ್ಥಳೀಯರು ಆಗ್ರಹಿಸಿದ್ದರು. ಬೆಂಕಿ ಹೇಗೆ ಬಿದ್ದಿದೆ ಎಂಬುದು ನಿಗೂಢವಾಗಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next