Advertisement

ಚಿಕ್ಕಮಗಳೂರಿನಲ್ಲಿ ಭಾರೀ ಬೆಂಕಿ ಅವಘಡ: ಹೊತ್ತಿ ಉರಿದ ಟಯರ್ ಅಂಗಡಿ

08:52 AM Jun 01, 2020 | keerthan |

ಚಿಕ್ಕಮಗಳೂರು: ಇಲ್ಲಿನ ಎನ್.ಎಂ.ಸಿ ಸರ್ಕಲ್ ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಟಯರ್ ಅಂಗಡಿ ಹೊತ್ತಿ ಉರಿದಿದೆ.

Advertisement

ನಗರದ ಎನ್.ಎಂ.ಸಿ ಸರ್ಕಲ್ ಇಂದು ಮುಂಜಾನೆ 3:30ಕ್ಕೆ ಸಮಯಕ್ಕೆ ಈ ಘಟನೆ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಟಯರ್ ಅಂಗಡಿ ಹೊತ್ತಿ ಉರಿದಿದೆ. ಅಂಗಡಿಯಲ್ಲಿದ್ದ ಬಹುತೇಕ ಟೈಯರ್ ಗಳು ಸುಟ್ಟು ಭಸ್ಮವಾಗಿದೆ.

ಸಂಪೂರ್ಣವಾಗಿ ಅಂಗಡಿಯೇ ಬೆಂಕಿಗೆ ಅಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಟಯರ್ ಗಳು ಬೆಂಕಿಗಾಹುತಿಯಾಗಿದೆ.

ಅಗ್ನಿ ಶಾಮಕದಳ ಸ್ಥಳಕ್ಕಾಗಮಿಸಿದ್ದು, ಸತತ ಎರಡು ಗಂಟೆಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next