Advertisement

ಹಾರ್ಡ್‌ವೇರ್‌ ಅಂಗಡಿಯಲ್ಲಿ ಅಗ್ನಿ ಆಕಸ್ಮಿಕ

06:42 AM Jan 11, 2019 | Team Udayavani |

ದಾವಣಗೆರೆ: ನಗರದ ಬಿನ್ನಿ ಕಂಪನಿ ರಸ್ತೆಯಲ್ಲಿರುವ ಮುದ್ದಳ್ಳಿ ಗಂಗಾ ಹಾರ್ಡ್‌ವೇರ್‌ ಅಂಗಡಿಯಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಂಗಡಿಯ ಎರಡನೇ ಮಹಡಿಯಲ್ಲಿದ್ದ ಬೆಲೆ ಬಾಳುವ ವಸ್ತುಗಳೆಲ್ಲಾ ಸಂಪೂರ್ಣ ಸುಟ್ಟು ಕರಕಲಾಗಿವೆ.

Advertisement

ಬೆಳಗ್ಗೆ 11 ಗಂಟೆ ಸಮಯದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಗೆ ಕ್ಷಣಾರ್ಧದಲ್ಲೇ ಅಂಗಡಿ 2ನೇ ಮಹಡಿಯಲ್ಲಿದ್ದ ಪೇಂಟ್, ಪ್ಲಾಸ್ಟಿಕ್‌, ಫೈಬರ್‌ ಪೈಪ್‌ಗ್ಳು, ಥಿನ್ನರ್‌, ಸ್ಟೈನ್ನರ್‌, ಕೃಷಿ ಚಟುವಟಿಕೆ ಮತ್ತು ಮನೆ ನಿರ್ಮಾಣದ ಸಲಕರಣೆಗಳು ಸೇರಿದಂತೆ ವಿವಿಧ ವಸ್ತುಗಳು ಸುಟ್ಟು ಕರಕಲಾಗಿವೆ. ನೆಲಮಹಡಿ ಹಾಗೂ ಒಂದನೇ ಮಹಡಿಯಲ್ಲಿದ್ದ ವಸ್ತುಗಳಿಗೆ ಹಾನಿ ಆಗಿಲ್ಲ. 2ನೇ ಮಹಡಿಯಲ್ಲಿ ವ್ಯಾಪಕವಾಗಿ ಹರಡಿದ ಬೆಂಕಿಯ ಕೆನ್ನಾಲಿಗೆಗೆ ವಸ್ತುಗಳೆಲ್ಲಾ ಸಂಪೂರ್ಣ ಸುಟ್ಟು ಸುಮಾರು 50 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಬೆಂಕಿ ಅವಘಡದ ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ದಾವಣಗೆರೆಯಿಂದ 3, ಹರಿಹರ 2, ಚಿತ್ರದುರ್ಗದಿಂದ 1 ವಾಹನಗಳನ್ನು ಬಳಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ವ್ಯಾಪಾರ-ವಹಿವಾಟು ಜೋರಿರುವ ಬಿನ್ನಿ ಕಂಪನಿ ರಸ್ತೆಯಲ್ಲಿ ಮೊದಲೇ ರಸ್ತೆ ಕಿರಿದಾಗಿರುವುದರಿಂದ ಬೆಂಕಿ ಅವಘಡ ವೀಕ್ಷಿಸಲು ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು. ಮೇಲಾಗಿ ಮಂಡಿ ಪೇಟೆ ರಸ್ತೆ ದುರಸ್ತಿ ನಡೆಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next