Advertisement

ಪ್ರಚೋದನಕಾರಿ ಪೋಸ್ಟ್ : ‘ಮಂಗಳೂರು ಮುಸ್ಲಿಂ’ಫೇಸ್ ಬುಕ್ ಪೇಜ್ ವಿರುದ್ಧ ಎಫ್ ಐಆರ್

06:22 PM Feb 23, 2022 | Team Udayavani |

ಮಂಗಳೂರು : ಬಜರಂಗ ದಳ ಕಾರ್ಯ ಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಪೋಸ್ಟ್ ಮಾಡಿದ್ದ ಮಂಗಳೂರು ಮುಸ್ಲಿಂ ಎಂಬ ದ ಫೇಸ್ ಬುಕ್ ಖಾತೆಯ ವಿರುದ್ಧ ಮಂಗಳೂರಿನಲ್ಲಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಪೇಜ್ ಕುರಿತಾಗಿ ದೂರುಗಳು ಬಂದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹರ್ಷ ಹತ್ಯೆಗೂ ಮುನ್ನ ಬೆದರಿಕೆ ಸ್ವರೂಪದ ಪೋಸ್ಟ್ ಗಳನ್ನೂ ಪೇಜ್ ನಲ್ಲಿ ಮಾಡಲಾಗಿತ್ತು, ಹರ್ಷ ಮಾತ್ರವಲ್ಲದೆ ಪತ್ರಕರ್ತರೊಬ್ಬರಿಗೂ ಟಾರ್ಗೆಟ್ ಮಾಡಿ ಬರೆಯಲಾಗಿತ್ತು. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದು, ಪೇಜ್ ನ ಜಾಡು ಬೆನ್ನತ್ತಿದ್ದಾರೆ.

ಈಗಾಗಲೇ ಮಂಗಳೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ / ಅವಹೇಳನಕಾರಿ ಪೋಸ್ಟ್ ಗಳ ಬಗ್ಗೆ ನಿಗಾ ವಹಿಸಲು ಸೋಶಿಯಲ್ ಮೀಡಿಯಾ ಸೆಲ್ ಕಾರ್ಯಾರಂಭಗೊಂಡಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next