Advertisement

ಡಿಕೆಶಿ ಪರ ಹೆದ್ದಾರಿ ತಡೆದ 20 ಮಂದಿ ಕೈ ಕಾರ್ಯಕರ್ತರ ಮೇಲೆ ಎಫ್ಐಆರ್

10:17 AM Sep 06, 2019 | Team Udayavani |

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆದ ಆರೋಪ ಹಿನ್ನಲೆಯಲ್ಲಿ ಕೆಪಿಸಿಸಿ ಸದಸ್ಯ ಎಸ್.
ಪಿ.ಶ್ರೀನಿವಾಸ್ ಸೇರಿ 20ಕ್ಕೂ ಹೆಚ್ವು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಚಿಕ್ಕಬಳ್ಳಾಪುರ ನಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಡಿ.ಕೆ. ಶಿವಕುಮಾರ್ ಬಂಧನ ವಿರೋಧಿಸಿ ಮಂಗಳವಾರ ಮಧ್ಯರಾತ್ರಿ ಕೆಪಿಸಿಸಿ ಸದಸ್ಯ ಎಸ್.ಪಿ ಶ್ರೀನಿವಾಸ್ ಸೇರಿದಂತೆ ಯುವ ಕಾಂಗ್ರೆಸ್ ಮುಖಂಡರಾದ ಅರುಣ್ ಕೊಳವನಹಳ್ಳಿ, ಶೆಟ್ಟಿಗೆರೆ ಮುರುಳಿ, ಚಿಕ್ಕಬಳ್ಳಾಪುರ ನಗರದ ನಿವಾಸಿಗಳಾದ ಷಾಹೀದ್, ಬಾಬಾಜಾನ್, ಸುರೇಶ್, ವಿನಯ್, ರಾಜಶೇಖರ್ ಹಾಗೂ ಮಹಮದ್ ಮತ್ತಿತರರು ನಗರದ ಹೊರ ವಲಯದ ಚದಲುಪುರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು, ಹೈದರಾಬಾದ್ ಹೆದ್ದಾರಿಯನ್ನು ತಡೆದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿರುವ ಆರೋಪ ಹೊರೆಸಿ ಒಟ್ಟು 20 ಮಂದಿ ಮೇಲೆ ಏಫ್ಐಆರ್ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next