Advertisement

FIR: ಕೇಂದ್ರ ಸಚಿವನ ಪುತ್ರನ ವಿರುದ್ಧ ಎಫ್ಐಆರ್‌

09:23 PM Sep 02, 2023 | Team Udayavani |

ಲಕ್ನೋ: ಕೊಲೆ ಪ್ರಕರಣದಲ್ಲಿ ಕೇಂದ್ರ ಸಚಿವ ಕೌಶಲ್‌ ಕಿಶೋರ್‌ ಪುತ್ರ ವಿಕಾಸ್‌ ಕಿಶೋರ್‌ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಪರವಾನಗಿಯಿದ್ದ ವಿಕಾಸ್‌ ಅವರ ಪಿಸ್ತೂಲನ್ನು ಬಳಸಿಕೊಂಡ ಮೂವರು ವ್ಯಕ್ತಿಗಳು, ವಿಕಾಸ್‌ ಆಪ್ತಸ್ನೇಹಿತನನ್ನು ವಿಕಾಸ್‌ ಮನೆಯಲ್ಲೇ ಹತ್ಯೆ ಮಾಡಿದ್ದರು. ಈ ವೇಳೆ ವಿಕಾಸ್‌ ದೆಹಲಿಯಲ್ಲಿದ್ದರು. ಬಳಕೆಯಾದ ಪಿಸ್ತೂಲ್‌ ಇವರದ್ದಾದ ಕಾರಣ ಶಸ್ತ್ರಾಸ್ತ್ರ ಕಾಯಿದೆಯಡಿ ಈ ಪ್ರಕರಣ ದಾಖಲಾಗಿದೆ.

Advertisement

ಆಗಿದ್ದೇನು?: ಉತ್ತರಪ್ರದೇಶದ ಲಕ್ನೋ ಹೊರವಲಯದಲ್ಲಿ ಕೇಂದ್ರ ಸಚಿವ ಕೌಶಲ್‌ ಕಿಶೋರ್‌ ಅವರ ಮನೆಯಲ್ಲಿ, ವಿನಯ್‌ ಶ್ರೀವಾಸ್ತವ (30) ಹತ್ಯೆಗೀಡಾಗಿದ್ದರು. ಬಂಧಿತರು ಮತ್ತು ವಿನಯ್‌ ಗುರುವಾರ ರಾತ್ರಿ ಇಸ್ಪೀಟ್‌ ಆಡಿದ್ದಾರೆ. ಈ ವೇಳೆ ವಿನಯ್‌ 12,000 ರೂ. ಕಳೆದುಕೊಂಡಿದ್ದಾರೆ. ಆಟ ಮುಂದುವರಿಸಲು ನಿರಾಕರಿಸಿದ ಆರೋಪಿಗಳು ಮತ್ತು ವಿನಯ್‌ ನಡುವೆ ಜಗಳವಾಗಿದೆ. ಈ ವೇಳೆ ಆರೋಪಿಗಳು, ಕೊಠಡಿಯಲ್ಲಿ ದಿಂಬಿನ ಕೆಳಗೆ ಇಟ್ಟಿದ್ದ ವಿಕಾಸ್‌ರ ಬಂದೂಕಿನಿಂದ ವಿನಯ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆ ವೇಳೆ ವಿಕಾಸ್‌ ದೆಹಲಿಯಲ್ಲಿ ಇದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಘಟನೆ ಸಂಬಂಧ ಅಜಯ್‌ ರಾವತ್‌, ಅಂಕಿತ್‌ ವರ್ಮಾ ಮತ್ತು ಶಮೀಮ್‌ ಅಲಿಯಾಸ್‌ ಬಾಬಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next