Advertisement

ಸುಳ್ಳು ಆರೋಪ: ಭಾಸ್ಕರ್‌ ಪ್ರಸಾದ್‌ ವಿರುದ್ಧ ಎಫ್ಐಆರ್‌

12:34 PM Jun 03, 2018 | Team Udayavani |

ಬೆಂಗಳೂರು: ನೆಲಮಂಗಲ ನಿವಾಸಿಯಾಗಿರುವ ಬಿ.ಆರ್‌ ಭಾಸ್ಕರ್‌ ಪ್ರಸಾದ್‌ ಎಂಬಾತ ಸಾಮಾಜಿಕ ತಾಲತಾಣದಲ್ಲಿ ನನ್ನ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡಿ, ನನ್ನ ಕೊಲೆಗೆ ಪ್ರಚೋದನೆ ನೀಡುತ್ತಿದ್ದು ಆತನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು ಡಿ.ಜೆ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಹಲವು ವರ್ಷಗಳಿಂದ ಕೋಮುವಾದದ ವಿರುದ್ಧ ಹಾಗೂ ಜಾತ್ಯತೀತತೆ ಪರವಾದ ಹೋರಾಟದಿಂದಾಗಿ ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದೇನೆ. ಗುರುವಾರ ರಾತ್ರಿ ಭಾಸ್ಕರ್‌ ಪ್ರಸಾದ್‌ ನನ್ನ ವಿರುದ್ಧ ಗಂಭೀರ ಆರೋಪ ಮಾಡಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಈ ವಿಚಾರವನ್ನು ನನ್ನ ಸ್ನೇಹಿತರು ಗಮನಕ್ಕೆ ತಂದಿದ್ದು, ಆತ ಮಾಡಿರುವ ಫೇಸ್‌ಬುಕ್‌ ಫೋಸ್ಟ್‌ನ ಹಿಂದೆ ನನ್ನ ಜೀವಕ್ಕೆ ಸಂಚಕಾರ ತರುವ ಸಂಚಿದೆ.

ಪರೋಕ್ಷವಾಗಿ ಆತ ನನ್ನ ಮೇಲೆ ಹಲ್ಲೆ, ಕೊಲೆಯತ್ನ ನಡೆಸಲು ಯತ್ನಿಸುತ್ತಿದ್ದಾನೆ. ಹೀಗಾಗಿ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಿದ್ದಾರೆ. ಈ ದೂರಿನ ಅನ್ವಯ ಭಾಸ್ಕರ್‌ ಪ್ರಸಾದ್‌ ವಿರುದ್ಧ ಐಪಿಸಿ 506 ಕಲಂ ಅಡಿಯಲ್ಲಿ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next