Advertisement

Chamundibetta: ಚಾ. ಬೆಟ್ಟದಲ್ಲಿ ನಿಯಮ ಉಲ್ಲಂಘಿಸಿದರೆ ಬೀಳುತ್ತೆ ದಂಡ! 

12:24 PM Aug 17, 2023 | Team Udayavani |

ಮೈಸೂರು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಹಾಗೂ ಪರಿಸರ ಸೂಕ್ಷ್ಮ ವಲ ಯವೂ ಆಗಿರುವ ಚಾಮುಂಡಿ ಬೆಟ್ಟ ಅರಣ್ಯ ಪ್ರದೇಶದ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಈ ಮೂಲಕ ಪ್ಲಾಸ್ಟಿಕ್‌ ಬಳಕೆ, ತ್ಯಾಜ್ಯ ವಿಲೇವಾರಿ, ಅನಧಿಕೃತ ಪ್ರವೇಶಕ್ಕೆ ಕಡಿ ವಾಣ ಹಾಕಿದ್ದು ನಿಯಮ ಉಲ್ಲಂಘಿಸುವ ಪ್ರವಾಸಿಗರು ಮತ್ತು ಭಕ್ತರಿಗೆ ದಂಡ ಬೀಳಲಿದೆ!.

Advertisement

ಇಲಾಖೆ ಕ್ರಮ: ಚಾಮುಂಡಿಬೆಟ್ಟಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುತ್ತಿರುವ ಜತೆಗೆ ಅನುಮತಿ ಇಲ್ಲದೇ ಚಾಮುಂಡಿ ಬೆಟ್ಟ ಮೀಸಲು ಅರಣ್ಯದೊಳಗೆ ಅತಿಕ್ರಮ ಪ್ರವೇಶಿಸುವುದು, ಮದ್ಯಪಾನ ಒಳಗೊಂಡಂತೆ ಹಾನಿಕಾರಕ ವಸ್ತುಗಳನ್ನು ಕಾಡಿನೊಳಗೆ ಬಳಸುವುದು ಮತ್ತು ತ್ಯಾಜ್ಯ ವಿಲೇ ಮಾಡಿ ಅರಣ್ಯಕ್ಕೆ ಹಾನಿ ಮಾಡುತ್ತಿರುವುದನ್ನು ತಡೆಯಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

ಪ್ಲಾಸ್ಟಿಕ್‌ ಬಳಕೆ, ತ್ಯಾಜ್ಯ ವಿಲೇವಾರಿ, ಅನಧಿಕೃತ ಪ್ರವೇಶ, ಅನುಮತಿ ಇಲ್ಲದ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮಾಡಿದರೆ ನಾಗರಿಕರು ದಂಡ ಪಾವತಿಸಬೇಕಾಗುತ್ತದೆ ಎಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರ ಡಿಸಿದ್ದಾರೆ.

ಕಾಡ್ಗಿಚ್ಚಿಗೂ ಕಾರಣ: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರು, ಭಕ್ತರು ತಿಂಡಿ ತಿನಿಸು ಸೇವಿಸಿ ನಂತರ ಎಲ್ಲೆಂದರಲ್ಲಿ ಆಹಾರ ಪೊಟ್ಟಣಗಳನ್ನು ವಿಲೇ ಮಾಡುತ್ತಿರುವುದು ಹಾಗೂ ಪ್ಲಾಸ್ಟಿಕ್‌ ಬಿಸಾಡುತ್ತಿರು ವುದರಿಂದ ಬೇಸಿಗೆಯಲ್ಲಿ ಅರಣ್ಯ ಬೆಂಕಿಗೆ ಇದು ಕಾರಣವಾಗಲಿದೆ. ಈ ತ್ಯಾಜ್ಯ ಕಚ್ಚಾ ವಸ್ತುವಾಗಿರು ವುದಲ್ಲದೆ ಬೆಂಕಿಯನ್ನು ಸುಲಭವಾಗಿ ನಂದಿಸಲೂ ಸಾಧ್ಯವಾಗದ ತೀವ್ರತರಹದ ಅರಣ್ಯ ಬೆಂಕಿಗೂ ಕಾರಣವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

ಮಾವನ-ಪ್ರಾಣಿ ಸಂಘರ್ಷ:  ಬೆಟ್ಟಕ್ಕೆ ಭೇಟಿ ನೀಡುವ ಭಕ್ತರು, ಪ್ರವಾಸಿಗರು, ಪ್ರಾಣಿಗಳಿಗೆ ತಿಂಡಿ-ತಿನಿಸು ನೀಡುತ್ತಿರುವುದು ವನ್ಯಜೀವಿಗಳ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುವು ದಲ್ಲದೇ ಮಾನವ-ಪ್ರಾಣಿ ಸಂಘರ್ಷ ಹೆಚ್ಚಿಸುತ್ತದೆ. ಇಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಹಾಗೂ ಇತರೇ ಸುಲಭವಾಗಿ ಕೊಳೆಯದ ವಸ್ತುಗಳ ಬಳಕೆ ಹೆಚ್ಚಾಗಿದ್ದು, ಪರಿಸರ ಮಾಲಿನ್ಯವಾಗುತ್ತಿದೆ.

Advertisement

ಪರಿಸರ ಸೂಕ್ಷ್ಮ ಪ್ರದೇಶದ ಚಾಮುಂಡಿ ಬೆಟ್ಟದ ನೈಸರ್ಗಿಕ ಸಂಪತ್ತನ್ನು ಇಂತಹ ವಿನಾಶಕಾರಿ ಚಟುವಟಿಕೆ ವಸ್ತುಗಳಿಂದ ರಕ್ಷಿಸಲು, ಚಾಮುಂಡಿಬೆಟ್ಟಕ್ಕೆ ಬರುವ ಪ್ರವಾಸಿಗರು, ಭಕ್ತರಿಗೆ ಅರಿವು ಮೂಡಿಸಲು ಹಾಗೂ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಿ, ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದೆ.

ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡ ಇಂತಿದೆ:

  • ಚಾಮುಂಡಿಬೆಟ್ಟಕ್ಕೆ ಅತಿಕ್ರಮ ಪ್ರವೇಶ 500 ರೂ.
  • ಅನುಮತಿ ಇಲ್ಲದ ಪ್ರದೇಶಗಳಲ್ಲಿ ವಾಹನ ನಿಲುಗಡೆ 1000
  • ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್‌ ಬಿಸಾಡುವುದು 500 ರೂ.
  • ಅಂಗಡಿ ಮಾಲಿಕರು ಪ್ಲಾಸ್ಟಿಕ್‌ ಮತ್ತು ಇತರೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದರೆ ಮೊದಲ ಬಾರಿಗೆ 2500 ರೂ., 2ನೇ ಬಾರಿಗೆ 5 ಸಾವಿರ ರೂ., 3ನೇ ಬಾರಿಗೆ 10 ಸಾವಿರ ರೂ. ದಂಡ.
  • ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಚಾಮುಂಡಿಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ಹೊರಗಡೆಯಿಂದ ಅನಧಿಕೃತವಾಗಿ ಬೆಟ್ಟಕ್ಕೆ ತೆರಳಿದರೆ 2500 ರೂ. ದಂಡ
  • ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೆ ಬೆಟ್ಟಕ್ಕೆ ಮದ್ಯಪಾನ ಸೇರಿದಂತೆ ಯಾವುದೇ ಹಾನಿಕಾರಕ ವಸ್ತು ಕೊಂಡೊಯ್ದರೆ 5 ಸಾವಿರ ರೂ.ದಂಡ
  • ವನ್ಯಜೀವಿಗಳಿಗೆ ಉಪದ್ರವ ನೀಡುವುದು, ತಿಂಡಿ-ತಿನಿಸು ನೀಡಿದರೆ 1 ಸಾವಿರ
  • ಇತರೆ ಯಾವುದೇ ಅರಣ್ಯ ಅಥವಾ ವನ್ಯಜೀವಿಗೆ ಹಾನಿ ಮಾಡಿದರೆ, ಹಾನಿ ಮಾಡುವ ಚಟುವಟಿಕೆ ನಡೆದರೆ 1 ಸಾವಿರ ರೂ. ದಂಡ ನಿಗದಿ

ಚಾಮುಂಡಿ ಬೆಟ್ಟ ಸೂಕ್ಷ್ಮ ಪರಿಸರ ವಲಯ ಆಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ, ಅಕ್ರಮ ಪ್ರವೇಶ, ತಡರಾತ್ರಿ ಪ್ರವೇಶ, ವಾಹನಗಳ ನಿಲುಗಡೆ ನಿರ್ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದಲ್ಲಿ ದಂಡ ವಿಧಿಸಲಾಗುವುದು.  -ಬಸವರಾಜು, ಡಿಸಿಎಫ್ ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next