Advertisement

ಸಾಲ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ..!

10:32 AM Dec 10, 2021 | Team Udayavani |

ಬೆಂಗಳೂರು: ಬ್ಯಾಂಕ್‌ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ವಿಫ‌ಲಗೊಂಡವರು, ಉದ್ಯಮಿಗಳಿಗೆ ಹತ್ತಾರು ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿ ನರೇಶ್‌ (36), ವಿಜಯ್‌ ಆನಂದ್‌ (37), ನಿವೇದಿತಾ (37), ಹರ್ಷಿಣಿ (29) ಬಂಧಿತರು. ಆರೋಪಿಗಳು ಇತ್ತೀಚೆಗೆ ಹೈದರಾಬಾದ್‌ ಮೂಲದ ಉದ್ಯಮಿ ಪಿ.ಕೃಷ್ಣಂ ರಾಜು ಎಂಬವರಿಗೆ 100 ಕೋಟಿ ರೂ. ಸಾಲ ನೀಡುವುದಾಗಿ ನಂಬಿಸಿ ಮುಂಗಡವಾಗಿ ಮೂರು ತಿಂಗಳ ಬಡ್ಡಿ 1.80 ಕೋಟಿ ರೂ. ಪಡೆದು, ಸಾಲ ಕೊಡಿಸದೆ ವಂಚಿಸಿ ದ್ದಾರೆ. ಈ ಸಂಬಂಧ ಉದ್ಯ ಮಿಯ ಅಳಿಯ ಮಂಥೆನಾ ತರುಣ್‌ ಗಾಂಧಿ ಎಂಬವರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿ ಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ:– ರಾಷ್ಟ್ರ ಕೂಟ ಉತ್ಸವ-ಸರ್ಕಾರದೊಂದಿಗೆ ಚರ್ಚೆ

ಪ್ರಕರ ಣದ ಪ್ರಮುಖ ಆರೋಪಿ ತಮಿಳುನಾಡು ಮೂಲದ ಕಾರ್ತಿ ವೇಲನ್‌ ತಲೆಮರೆಸಿ ಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಏನಿದು ಪ್ರಕರಣ?: ಹೈದರಾಬಾದ್‌ನ ಕೃಷ್ಣಂರಾಜು 100 ಕೋಟಿ ರೂ. ಸಾಲಕ್ಕಾಗಿ ಸ್ನೇಹಿತರ ಬಳಿ ಹೇಳಿಕೊಂಡಿದ್ದರು. ಈ ಮಾಹಿತಿ ತಿಳಿದುಕೊಂಡ ಆರೋಪಿಗಳು ಡಿ.1ರಂದು ಹೈದರಾಬಾದ್‌ನಲ್ಲಿ ಕೃಷ್ಣಂ ರಾಜು ಅವರನ್ನು ಭೇಟಿಯಾಗಿ ಬೆಂಗಳೂರಿನಲ್ಲಿರುವ ಫ್ಯೂಚರ್‌ ಕ್ರೆಸ್ಟ್‌ ವೆಂಚರ್‌ ಹೆಸರಿನ ಕಂಪನಿಯಿಂದ 100 ಕೋಟಿ ರೂ. ಸಾಲ ಕೊಡಿಸುವುದಾಗಿ ಹೇಳಿದ್ದರು. ಹೀಗಾಗಿ ಕೃಷ್ಣಂ ರಾಜು ಅವರನ್ನು ಡಿ.2ರಂದು ನಗರಕ್ಕೆ ಕರೆತಂದು, ಕಾತಿರ್‌ ವೇಲನ್‌ನನ್ನು ಕಂಪನಿಯ ಮುಖ್ಯಸ್ಥ ಎಂದು ಪರಿಚಯಿಸಿದ್ದರು.

Advertisement

ಇದನ್ನೂ ಓದಿ:- ರಾಷ್ಟ್ರ ಕೂಟ ಉತ್ಸವ-ಸರ್ಕಾರದೊಂದಿಗೆ ಚರ್ಚೆ

ಆಗ ಆರೋಪಿ ಕಾತಿರ್‌ ವೇಲನ್‌ ಸಾಲ ಬೇಕಾದರೆ ಮೂರು ತಿಂಗಳ ಬಡ್ಡಿ 1.80 ಕೋಟಿ ರೂ. ಅನ್ನು ಮುಂಗಡವಾಗಿ ಪಾವತಿ ಸಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಅದನ್ನು ನಂಬಿದ ಕೃಷ್ಣಂ ರಾಜು, ಆತ ಸೂಚಿಸಿದ ಖಾತೆಗಳಿಗೆ 1.80 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಡಿ.8ರಂದು ಕಾತಿರ್‌ ವೇಲನ್‌ಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್ ಬಂದಿದೆ. ಬಳಿಕ ಕಂಪನಿ ಕಚೇರಿ ಬಳಿ ತೆರಳಿ ವಿಚಾರಿಸಿದಾಗ ಕಚೇರಿಯಲ್ಲಿದ್ದವರು ಅಸಡ್ಡೆಯಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ವಂಚನೆ ದೂರು ದಾಖಲಿಸಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಾಲಗಾರರ ಹುಡುಕಾಟ

ಆರೋಪಿಗಳ ಪೈಕಿ ನಿವೇದಿತಾ ಮತ್ತು ಹರ್ಷಿಣಿ , ವಿಜಯ್‌ ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿ ವಿಫ‌ಲಗೊಂಡವರು ಹಾಗೂ ಉದ್ಯಮಕ್ಕಾಗಿ ಕೋಟ್ಯಂತರ ರೂ. ಸಾಲಕ್ಕಾಗಿ ಹುಡುಕಾಟ ನಡೆಸುತ್ತಿರುವ ವ್ಯಕ್ತಿಗಳ ಬಗ್ಗೆ ಮಧ್ಯವರ್ತಿಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದರು. ನಂತರ ಅವರನ್ನು ಸಂಪರ್ಕಿಸಿ ಸಾಲದ ಬಗ್ಗೆ ಚರ್ಚಿಸಿ ವಂಚಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

1.50 ಕೋಟಿ ರೂ.ಗೆ ಚಿನ್ನ ಖರೀದಿ !

ಉದ್ಯಮಿ ಪಿ.ಕೃಷ್ಣ ರಾಜು ಅವರಿಂದ ಪಡೆದಿದ್ದ 1.80 ಕೋಟಿ ರೂ. ಪೈಕಿ 30 ಲಕ್ಷ ರೂ.ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದರು. ಬಾಕಿ 1.50 ಕೋಟಿ ರೂ.ಗೆ ಚಿನ್ನಾಭರಣ ಖರೀದಿಸಿದ್ದರು. ಆ ಚಿನ್ನಾಭರಣ ಸದ್ಯ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಾರ್ತಿ ವೇಲನ್‌ ಬಳಿ ಇದೆ ಎಂಬ ಮಾಹಿತಿ ಸಿಕ್ಕಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ವಂಚನೆಗೊಳಗಾದವರು ಠಾಣೆಗೆ ದೂರು ನೀಡಿ

ಆರೋಪಿಗಳಿಂದ ವಂಚನೆಗೊಳಗಾದ ಸಾರ್ವಜನಿಕರು ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಬಹುದು. ದೂರಿನ ಪ್ರತಿ ಜತೆಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next