Advertisement

ಸರಕಾರಿ ಸೌಲಭ್ಯ ಸಿಗಲು ಆರ್ಥಿಕ ಮಿತಿ ಅಂತಿಮ ಅಲ್ಲ

11:40 PM Sep 14, 2022 | Team Udayavani |

ಹೊಸದಿಲ್ಲಿ: ಸರಕಾರ ಜಾರಿಗೊಳಿಸುವ ಯೋಜ ನೆಗಳು ನಿಗದಿತ ವರ್ಗಕ್ಕೆ ಸಿಗಬೇಕು ಎಂದಾದರೆ ಅದಕ್ಕೆ ಆರ್ಥಿಕ ಮಿತಿಯೇ ಅಂತಿಮವಾದದ್ದಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ನೇತೃತ್ವದ ಸಾಂವಿಧಾನಿಕ ಪೀಠ ಬುಧವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

Advertisement

ಆರ್ಥಿಕವಾಗಿ ಮೇಲ್ವರ್ಗದವರಿಗೆ ಶೇ.10 ಮೀಸಲು ನೀಡಿರುವ ಕೇಂದ್ರ ಸರಕಾರ ಪ್ರಶ್ನೆ ಮಾಡಿ ಸಲ್ಲಿಕೆ ಮಾಡಲಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ಈ ಅಭಿಪ್ರಾಯಪಟ್ಟಿದೆ.

ಕುಟುಂಬದ ಆರ್ಥಿಕ ಸ್ಥಿತಿಯ ಏಕೈಕ ಮಾನದಂಡದ ಮೇಲೆ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕೋಟಾ ಅಸಂವಿಧಾನಿಕವಾಗಿದೆ ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜನರ ಅನುಕೂಲಕ್ಕಾಗಿ ಸರಕಾರಗಳು ವಿವಿಧ ಯೋಜನೆಗಳನ್ನು ರೂಪಿಸುತ್ತಿವೆ. ಅರ್ಹರಿಗೆ ಸಿಗುವಂತೆ ಮಾಡಲು ಕೆಲವು ನಿಯಮಗಳನ್ನು ರಚನೆ ಮಾಡುತ್ತದೆ. ಅದಕ್ಕೆ ಆದಾಯದ ಮಿತಿ ವಿಧಿಸಲಾಗಿದ್ದರೂ, ಅದುವೇ ಅಂತಿಮವಾಗಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next