Advertisement

ಹಣಕಾಸು ಸಂಸ್ಥೆ ಗ್ರಾಹಕರ ಜೀವಾಳ

02:19 PM Feb 05, 2022 | Team Udayavani |

ಮುದಗಲ್ಲ: ಸಹಕಾರ ಕ್ಷೇತ್ರದ ಮೂಲಕ ಹಣಕಾಸು ಸಂಸ್ಥೆಗಳು ಹೆಚ್ಚೆಚ್ಚು ಬೆಳೆಯುತ್ತಿರುವದು ಮಧ್ಯಮ ವರ್ಗದ ಜನರೂ ಕೂಡ ಆರ್ಥಿಕವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಸಹಕಾರಿ ಪತ್ತಿನ ಸಂಸ್ಥೆಗಳು ಗ್ರಾಹಕರ ಜೀವಾಳವಾಗಲಿ ಎಂದು ಅಂಕಲಿಮಠದ ಫಕ್ಕೀರಸ್ವಾಮಿಗಳು ಹೇಳಿದರು.

Advertisement

ಪಟ್ಟಣದ ಕಿಲ್ಲಾ ರಸ್ತೆಯಲ್ಲಿ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ, ನಿಯಮಿತ ಕವಿತಾಳ ಮುದಗಲ್ಲ ಪಟ್ಟಣದಲ್ಲಿ ಶಾಖೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಹಣಕಾಸು ಸಂಸ್ಥೆಗಳು ಹೆಚ್ಚೆಚ್ಚು ಸಹಕಾರಿ ಸಂಸ್ಥೆಗಳ ಮೂಲಕ ಹುಟ್ಟುತ್ತಿವೆ. ಅವುಗಳು ಗ್ರಾಹಕರ ಜೀವಾಳವಾಗಿ ಬೆಳೆಯಬೇಕು. ಗ್ರಾಹಕರ ಮನವೊಲಿಸಿ ಸಾಲ ವಸೂಲಾತಿಗೆ ಮುಂದಾಗಬೇಕು. ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅರಿತುಕೊಂಡು ಸಂಸ್ಥೆಯ ಲಾಭಕ್ಕೆ ಕೊಂಚ ಕಡಿಮೆಯಾದರೂ ಗ್ರಾಹಕರ ಜೀವಾಳವಾಗಬೇಕೆಂದು ಕಿವಿಮಾತು ಹೇಳಿದರು.

ಈ ಸಮಯದಲ್ಲಿ ಬ್ಯಾಂಕಿನ ಅಧ್ಯಕ್ಷ ರಾಜೇಶ ಬನ್ನಿಗಿಡದ ಸೇರಿದಂತೆ ಬ್ಯಾಂಕಿನ ನಿರ್ದೇಶಕರು, ಮುದಗಲ್‌, ಲಿಂಗಸುಗೂರು ಶಾಖೆಗಳ ಸಲಹಾ ಸಮೀತಿ ಸದಸ್ಯರು, ಸಿಬ್ಬಂದಿ ವರ್ಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next