Advertisement

ಸತೀಶ್‌ ಪೂಜಾರಿ ಕುಟುಂಬಕ್ಕೆ ಆರ್ಥಿಕ ನೆರವು

12:54 PM Jul 18, 2021 | Team Udayavani |

ಮುಂಬಯಿ: ಇತ್ತಿಚೆಗೆ ನಿಧನ ಹೊಂದಿದ ಚೆಂಬೂರು ತಿಲಕ ನಗರ ಪೆಸ್ತೂಲ್‌ ಕರ್ನಾಟಕ ಸಂಘ ಮತ್ತು ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಭಕ್ತ ವೃಂದ ಮುಂಬಯಿ ಇದರ ಸಕ್ರಿಯ ಸದಸ್ಯ, ಖ್ಯಾತ ಭಜನ ಗಾಯಕ, ಸಾಮಾಜಿಕ ಸೇವಾಕರ್ತ ಸತೀಶ್‌ ಪೂಜಾರಿ ಅವರ ನಿಸ್ವಾರ್ಥ ಮನೋಭಾವದ ಸಾಮಾಜಿಕ ಸೇವೆಯನ್ನು ಮನಗಂಡು ಅವರ ಅಭಿಮಾನಿಗಳು ಹಾಗೂ ಎರಡು ಸಂಸ್ಥೆಗಳ ಸದಸ್ಯರು ಸಂಗ್ರಹಿಸಿದ ಆರ್ಥಿಕ ನೆರವು 2.40ಲಕ್ಷ ರೂ. ಮೊತ್ತದ ಚೆಕ್‌ನ್ನು ಅವರ ಪತ್ನಿ ಬೇಬಿ ಸತೀಶ್‌ ಅವರಿಗೆ ಹಸ್ತಾಂತರಿಸಲಾಯಿತು.

Advertisement

ಈ ಸಂದರ್ಭ ಸಂಘದ ಗೌರವ ಅಧ್ಯಕ್ಷ ಸತೀಶ್‌ ಶೆಟ್ಟಿ, ಕಾರ್ಯದರ್ಶಿ ಟಿ. ಆರ್‌. ಶೆಟ್ಟಿ, ಕೋಶಾಧಿಕಾರಿ ಅರುಣ್‌ ಕುಮಾರ್‌ ಶೆಟ್ಟಿ, ಸುದೇಶ್‌ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next