Advertisement

ನೈಸರ್ಗಿಕ ಅನಿಲದ ವ್ಯಾಟ್‌ ಕಡಿತಕ್ಕೆ ಜೇಟ್ಲಿ ಸೂಚನೆ

09:25 AM Aug 19, 2017 | Karthik A |

ಹೊಸದಿಲ್ಲಿ: ಜಿಎಸ್‌ಟಿ ವ್ಯಾಪ್ತಿಯ ಹೊರಗಿರುವಂಥ ನೈಸರ್ಗಿಕ ಅನಿಲ ಹಾಗೂ ಇತರೆ ಇಂಧನಗಳ ಮೇಲಿನ ಮಾರಾಟ ತೆರಿಗೆ ಅಥವಾ ವ್ಯಾಟ್‌ ಅನ್ನು ಕಡಿತಗೊಳಿಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಪತ್ರ ಬರೆದಿದ್ದಾರೆ. ಈ ಅನಿಲಗಳು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲವಾದರೂ, ಹೊಸ ತೆರಿಗೆಯಡಿ ಬರುವಂಥ ಸರಕುಗಳಿಗೆ ಇನ್‌ಪುಟ್‌ ಆಗಿ ಬಳಸಲಾಗುತ್ತದೆ. ಹಾಗಾಗಿ, ಇವುಗಳ ಮಾರಾಟ ತೆರಿಗೆ ಕಡಿತಗೊಳಿಸಿ ಎಂದು ಪತ್ರದಲ್ಲಿ ಕೋರಲಾಗಿದೆ. ಜಿಎಸ್‌ಟಿ ಜಾರಿಯಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಇನ್‌ಪುಟ್‌ ವೆಚ್ಚ ಹೆಚ್ಚಾಗಿದೆ ಎಂದು ಉತ್ಪಾದಕರು ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಸಚಿವ ಜೇಟ್ಲಿ ಈ ಸಲಹೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next