Advertisement

ಉತ್ತರಪ್ರದೇಶದಲ್ಲಿ ಕೊನೆಗೂ ಸೈಕಲ್‌ ಏರಿದ ಕೈ : ಬಿಜೆಪಿಗೆ ನಷ್ಟ ? 

05:05 PM Jan 22, 2017 | Team Udayavani |

ಲಕ್ನೋ: ಭಾರೀ ಹಗ್ಗ ಜಗ್ಗಾಟದ ಬಳಿಕ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಆಡಳಿತಾರೂಢ ಸಮಾಜವಾದಿ ಪಕ್ಷದ ನಡುವೆಸೀಟು ಹಂಚಿಕೆ ಕುರಿತಾಗಿದ ಬಿಕ್ಕಟ್ಟು ಭಾನುವಾರ ಅಂತ್ಯಗೊಂಡಿದೆ.  ಚುನಾವಣಾ ಪೂರ್ವ ಮೈತ್ರಿ ಅಂತಿಮಗೊಂಡಿದ್ದು ಜೊತೆಯಾಗಿ ಬಿಜೆಪಿ ಮತ್ತು ಬಿಎಸ್‌ಪಿ ಎದುರು ಹೋರಾಡಲು ಸಿದ್ಧವಾಗಿದೆ. 

Advertisement

 ವರದಿಯಾದಂತೆ 403 ವಿಧಾನ ಸಭಾ ಸ್ಥಾನಗಳ ಪೈಕಿ 298 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಸ್ಪರ್ಧಿಸಲಿದ್ದು, ಕಾಂಗ್ರೆಸ್‌ಗೆ 105 ಸ್ಥಾನಗಳನ್ನು ಬಿಟ್ಟು ಕೊಡಲಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ , ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರ ನಡುವೆ ದೂರವಾಣಿಯಲ್ಲಿ ಮಾತುಕತೆ ನಡೆದಿದ್ದು ಈ ವೇಳೆ ಸೀಟು ಹಂಚಿಕೆಕುರಿತಾಗಿನ ಬಿಕ್ಕಟ್ಟು ಅಂತ್ಯಗೊಂಡಿದೆ ಎಂದು ಹೇಳಲಾಗಿದೆ. 

ಮೈತ್ರಿಯಿಂದ ಬಿಜೆಪಿ ಮೇಲೆ ಪರಿಣಾಮ 
ಎಸ್‌ಪಿ ಮತ್ತು ಕಾಂಗ್ರೆಸ್‌ ಮೈತ್ರಿಯಿಂದಾಗಿ ಮತ ವಿಭಜನೆಯಾಗದೆ ಶತಾಯ ಗತಾಯ ಅಧಿಕಾರ ಹಿಡಿಯಲು ಕನಸು ಕಾಣುತ್ತಿರುವ ಬಿಜೆಪಿಗೆ ಹೊಡೆತವಾಗಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

ಉತ್ತರ ಪ್ರದೇಶದಲ್ಲಿ ಫೆಬ್ರವರಿ 11 ರಿಂದ ಮಾರ್ಚ್‌ 8 ರ ವರೆಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next