Advertisement
ಕನ್ನಡ ಸೇರಿದಂತೆ ಯಾವುದೇ ಭಾಷೆಯ ಚಿತ್ರಗಳನ್ನೂ ಸಹ ಪ್ರದರ್ಶಿಸಬಾರದು ಎಂದು ಪ್ರದರ್ಶಕ ಹಾಗೂ ವಿತರಕರಿಗೆ ಮಂಡಳಿ ಮನವಿ ಮಾಡಿದೆ. ಈ ತೀರ್ಮಾನಕ್ಕೆ ತಮಿಳು ನಿರ್ಮಾಪಕರ ಸಂಘ ಕೂಡ ಬದ್ಧವಾಗಿದ್ದು, ಹೋರಾಟಕ್ಕೆ ಕೈ ಜೋಡಿಸಿದೆ. ಸಮಸ್ಯೆ ಬಗೆಹರಿಯುವವರೆಗೂ ಯಾವ ಸಿನಿಮಾ ಪ್ರದರ್ಶನವನ್ನೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
Related Articles
ತೆಗೆದುಕೊಂಡಿದ್ದೇವೆ. ಕೇವಲ ಕನ್ನಡ ಚಿತ್ರ ಮಾತ್ರವಲ್ಲ, ಎಲ್ಲಾ ಭಾಷೆಯ ಚಿತ್ರಗಳೂ ಕೂಡ ಇದೇ ತೀರ್ಮಾನಕ್ಕೆ ಬದ್ಧವಾಗಿವೆ. ಈ ತೀರ್ಮಾನದಿಂದ ನಿರ್ಮಾಪಕರಿಗೆ ಕಷ್ಟ ಆಗುತ್ತೆ. ಆದರೆ, ಎಲ್ಲರೂ ಸಹಿಸಿಕೊಳ್ಳಬೇಕು. ಇದು ಚಿತ್ರರಂಗದ ಒಳಿತಿಗಾಗಿ ಅಷ್ಟೆ ಎಂದರು.
Advertisement
ಪರ್ಯಾಯ ವ್ಯವಸ್ಥೆಗೆ ಯೋಚನೆ: ಈ ಸಮಸ್ಯೆಯಿಂದ ಹೊರ ಬರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಒಂದು ತೀರ್ಮಾನ ಮಾಡಿಕೊಂಡಿದೆ. ಜಂಟಿಯಾಗಿ ಪ್ರೊಜೆಕ್ಟರ್ ಹಾಗು ಸರ್ವರ್ ಹಾಕಿಕೊಂಡು ನಾವೇನಿರ್ಮಾಪಕರ ಸಹಾಯಕ್ಕೆ ನಿಲ್ಲುತ್ತೇವೆ. ಇದಕ್ಕೆ ಈಗಾಗಲೇ ರಾಕ್ಲೈನ್ ವೆಂಕಟೇಶ್ ಒಂದು ಹೊಸ ಪ್ಲಾನ್ ಕೂಡ ಮಾಡಿದ್ದಾರೆ. ನಾವೇ ಹೂಡಿಕೆ ಮಾಡಲು ತೀರ್ಮಾನಿಸಿರುವ ಒಂದು ಪ್ರೊಜೆಕ್ಟರ್ಗೆ ಸುಮಾರು 8 ಲಕ್ಷ ರೂ.ನಷ್ಟು ವೆಚ್ಚ ತಗುಲಲಿದೆ. ರಾಜ್ಯಾದ್ಯಂತ
ಸುಮಾರು 100 ಚಿತ್ರಮಂದಿರಗಳಿಗೆ ಈ ವ್ಯವಸ್ಥೆ ಮಾಡುತ್ತೇವೆ. ಇದಕ್ಕೆ ಸುಮಾರು 8 ಕೋಟಿ ಬೇಕಾಗುತ್ತದೆ ಎಂದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆಗೆದುಕೊಂಡಿರುವ ಈ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ತಮಿಳುನಾಡು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ವಿಶಾಲ್ ಹಾಗೂ ಉಪಾಧ್ಯಕ್ಷ ಪ್ರಕಾಶ್ ರಾಜ್ ಕೂಡ ಹೇಳಿದ್ದಾರೆ. ಈ ಸಂದರ್ಭದಲ್ಲಿ ರಾಕ್ಲೈನ್ ವೆಂಕಟೇಶ್, ಮುನಿರತ್ನ ಸೇರಿದಂತೆ ಮಂಡಳಿ ಪದಾಧಿಕಾರಿಗಳು ಇದ್ದರು.