Advertisement

ಎಚ್ಡಿಕೆ, ಸಿಎಸ್ಪಿ ವಿರುದ್ಧ ಪ್ರಕರಣ ದಾಖಲಿಸಿ

12:04 PM May 06, 2020 | mahesh |

ಮಂಡ್ಯ: ಹೃದಯಾಘಾತದಿಂದ ಮುಂಬೈನಲ್ಲಿ ಮೃತಪಟ್ಟ ಪಾಂಡವಪುರ ತಾಲೂಕು ಬಿ.ಕೊಡಗಹಳ್ಳಿ ವ್ಯಕ್ತಿಯ ದೇಹದಲ್ಲಿ ಕೋವಿಡ್ ಸೋಂಕು ಇತ್ತೆಂದು ಸುಳ್ಳು ಪ್ರಚಾರ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಶಾಸಕ ಪುಟ್ಟರಾಜು ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಬಿಜೆಪಿ ಮುಖಂಡ ಮಂಜುನಾಥ್‌
ಆಗ್ರಹಿಸಿದ್ದಾರೆ.

Advertisement

ಮೃತನಿಗೆ ಸೋಂಕು ಇತ್ತು ಎಂಬುದಕ್ಕೆ ಅವರ ಬಳಿ ದಾಖಲೆ ಇದ್ದರೆ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಮೃತನ ಪುತ್ರ, ಇಬ್ಬರು ಪುತ್ರಿಯರು ಹಾಗೂ ಮೊಮ್ಮಗಳಿಗೆ
ಕೋವಿಡ್ ಸೋಂಕಿರುವುದು ದೃಢಪಟ್ಟಿರುವುದನ್ನೇ ಗುರಿಯಾಗಿಸಿಕೊಂಡು ಮೃತ ವ್ಯಕ್ತಿಯಲ್ಲೂ ಸೋಂಕಿತ್ತು ಎಂದುಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಎಸ್ಪಿಗೆ
ದೂರು ನೀಡಿದ್ದಾರೆ.

ಮೃತ ವ್ಯಕ್ತಿಯ ಮರಣ ಪ್ರಮಾಣ ಪತ್ರವನ್ನು ಸುಳ್ಳಾಗಿ ಕೊಟ್ಟಿದ್ದರೆ ಮುಂಬೈ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಬೇಕು. ಒಮ್ಮೆ ಎಚ್‌ಡಿಕೆ ಹಾಗೂ ಪುಟ್ಟರಾಜು ಮೃತ ವ್ಯಕ್ತಿಯಲ್ಲಿ
ಕೋವಿಡ್ ಸೋಂಕು ಇತ್ತು ಎನ್ನುವುದಕ್ಕೆ ಅಸಲಿ ದಾಖಲೆ ಒದಗಿಸದಿದ್ದಲ್ಲಿ ಇಬ್ಬರ ಮೇಲೂ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next