Advertisement

ವಿಟ್ಲ: ಸಂಘಟನೆ ವಿರುದ್ಧ ಪ್ರಕರಣ ದಾಖಲು

12:33 AM Feb 19, 2023 | Team Udayavani |

ವಿಟ್ಲ: ಅಡ್ಯನಡ್ಕ ಸಭಾಭವನವೊಂದರಲ್ಲಿ ಸಂಘಟನೆ ಯೊಂದು ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಇಸ್ಲಾಂ ಮತ ಪ್ರವಚನ ಮಾಡಿದ್ದಾರೆ ಎಂದು ಹಿಂದೂ ಸಂಘಟನೆ ಆರೋಪಿಸಿದ್ದು, ಹಿಂದೂ ವಿದ್ಯಾರ್ಥಿಗಳನ್ನು ಹೊರಕ್ಕೆ ಕಳುಹಿಸಿದ ಘಟನೆ ಸಂಭವಿಸಿದೆ.

Advertisement

ಶೈಕ್ಷಣಿಕ ಕಾರ್ಯಾಗಾರದಲ್ಲಿ ಮತಪ್ರವಚನ ಮಾಡುತ್ತಿದ್ದಾರೆ ಎಂದು ಭಾಗವಹಿಸಿದ್ದ ಕೆಲವು ವಿದ್ಯಾರ್ಥಿಗಳು ಹಿಂದೂ ಸಂಘಟನೆಗೆ ತಿಳಿಸಿದ್ದರು. ಹಿಂದೂ ಸಂಘಟನೆ ಸ್ಥಳಕ್ಕೆ ತೆರಳಿ, ವಿದ್ಯಾರ್ಥಿಗಳನ್ನು ಹೊರಕ್ಕೆ ಕಳುಹಿಸಿ ಆಕ್ರೋಶ ವ್ಯಕ್ತಪಡಿಸಿ ಪ್ರಕರಣದ ವಿರುದ್ಧ ವಿಟ್ಲ ಠಾಣೆಗೆ ದೂರು ನೀಡಿದೆ. ಮತ ಪ್ರವಚನ ನಡೆಸಿದೆ ಎನ್ನಲಾದ ಸಂಘಟನೆಯ ವಿರುದ್ಧ ಕೋಮು ಪ್ರಚೋದನೆ ಯತ್ನ ಪ್ರಕರಣ ದಾಖಲಾಗಿದೆ.

ಚಾಲಕ ಆತ್ಮಹತ್ಯೆ
ವಿಟ್ಲ: ವಿಟ್ಲ ಸಮೀಪದ ಕನ್ಯಾನದಲ್ಲಿ ಆಟೋ ಚಾಲಕ ದಿನೇಶ್‌ ಬೈರಿಕಟ್ಟೆ (32) ಶನಿವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಅವಿ ವಾಹಿತರಾಗಿದ್ದರು.

ಕೃಷಿಕ ಆತ್ಮಹತ್ಯೆ
ಪುತ್ತೂರು: ಕೀಟನಾಶಕ ಸೇವಿಸಿ ಕೃಷಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ನೂರು ಗ್ರಾಮದ ಸೇಡಿಯಾಪುವಿನಲ್ಲಿ ಫೆ. 16ರಂದು ನಡೆದಿದೆ.ಸೇಡಿಯಾಪು ದಿ| ಈಶ್ವರ ಗೌಡ ಅವರ ಪುತ್ರ ಜತ್ತಪ್ಪ ಗೌಡ (68) ಆತ್ಮಹತ್ಯೆ ಮಾಡಿಕೊಂಡವರು.

ತೀರಾ ಅನಾರೋಗ್ಯದಿಂದಿದ್ದ ಅವರು ಸಂಜೆ ಮನೆಯಲ್ಲಿ ಕೃಷಿಗೆ ಬಳಸುವ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next