Advertisement

ಹೊಡೆದಾಟ,ಸರಕಾರದಿಂದಲೇ ತನಿಖೆಯಾಗಲಿ’: ಕೆ.ಎಸ್‌. ಈಶ್ವರಪ್ಪ

01:33 AM Jan 24, 2019 | Team Udayavani |

ಶಿವಮೊಗ್ಗ: ರೆಸಾರ್ಟ್‌ನಲ್ಲಿ ಶಾಸಕರ ಹೊಡೆದಾಟ, ರಾಜ್ಯದಲ್ಲಿ ಶೋಕಾಚರಣೆ ವೇಳೆ ಸಚಿವ ಪ್ರಿಯಾಂಕ್‌ ಖರ್ಗೆಯವರು ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಂಡಿದ್ದು, ಇವೆಲ್ಲ ಕಾಂಗ್ರೆಸ್‌ ಸಂಸ್ಕೃತಿಗೆ ಸಾಕ್ಷಿ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಟೀಕಿಸಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲ್ಟನ್‌ ರೆಸಾರ್ಟ್‌ನಲ್ಲಿ ನಡೆದ ಶಾಸಕರ ಗಲಾಟೆ ಪ್ರಕರಣದ ತನಿಖೆಯನ್ನು ಸರ್ಕಾರವೇ ಮಾಡಬೇಕು. ಈ ಬಗ್ಗೆ ಕಾಂಗ್ರೆಸ್‌ ಪಕ್ಷದವರೇ ತನಿಖೆ ಮಾಡಿದ್ರೆ ಏನಾಗು ತ್ತದೆ? ಬರೀ ಎಫ್‌ಐಆರ್‌ ಹಾಕಿದ್ರೆ ಏನೂ ಪ್ರಯೋಜನವಿಲ್ಲ. ಕೊಲೆ ಮಾಡೋಕೆ ಏನೇನು ಮಾಡಬಹುದೋ ಅಷ್ಟನ್ನೂ ಮಾಡಿದ್ದಾರೆ. ಆದರೆ ಕೊಲೆ ಮಾಡಿಲ್ಲ ಅಷ್ಟೆ. ಶಾಸಕ ಆನಂದ್‌ ಸಿಂಗ್‌ ಇನ್ನೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಆಸ್ಪತ್ರೆ ಯಿಂದ ಹೊರ ಬರೋಕೆ ಹೆದರುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು. ಸಾಧ್ಯವಾದರೆ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಕರಣದ ತನಿಖೆ ಮಾತ್ರ ಸರಕಾರದಿಂದಲೇ ನಡೆಸಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next