Advertisement

Pratap Simha ಬಿಜೆಪಿ ಟಿಕೆಟ್‌ ತಪ್ಪಿದರೆ ಹೋರಾಟ: ಪ್ರಮೋದ ಮುತಾಲಿಕ್‌

11:29 PM Mar 10, 2024 | Team Udayavani |

ಬಾಗಲಕೋಟೆ: ಸಂಸದ ಪ್ರತಾಪಸಿಂಹ ಅವರಿಗೆ ಬಿಜೆಪಿ ಟಿಕೆಟ್‌ ತಪ್ಪಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಹೇಳಿದರು.

Advertisement

ಕಲಾದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ಞಾಸಿಂಗ್‌ ಅವರಿಗೂ ಟಿಕೆಟ್‌ ತಪ್ಪಿದ್ದು ಸರಿಯಲ್ಲ. ಗೋಡ್ಸೆ ಒಬ್ಬ ದೇಶಭಕ್ತ. ಗಾಂಧೀಜಿಗೆ ಗುಂಡು ಹಾಕಿದ್ದು ತಪ್ಪು ಇರಬಹುದು. ಆದರೆ ದೇಶದ್ರೋಹ ಎನ್ನುವುದು ತಪ್ಪು. ಇಂಡಿಯಾ ಒಕ್ಕೂಟದಿಂದ ಬಿಜೆಪಿಗೆ ಹಿನ್ನಡೆಯಾಗದು. ಅದು ದಾರಿ ತಪ್ಪಿದ, ವಿಚಾರಹಿತ ಒಕ್ಕೂಟ. ಯಾವುದೇ ಸಿದ್ಧಾಂತ, ನೀತಿ-ನಡವಳಿಕೆ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next