Advertisement

Congress ಅಭ್ಯರ್ಥಿ ಲಕ್ಷ್ಮಣ್‌ರನ್ನು ಜೈಲಿಗೆ ಕಳುಹಿಸುವೆ: ಪ್ರತಾಪ ಸಿಂಹ

07:23 PM Mar 26, 2024 | Team Udayavani |

ಮೈಸೂರು: ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ್‌ ನನ್ನ ಮೇಲೆ ಮಾಡಿದ್ದ ಸುಳ್ಳು ಆರೋಪ ಸಂಬಂಧ, ಎರಡು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದೇನೆ. ಅವರನ್ನು ಖಂಡಿತವಾಗಿಯೂ ಜೈಲಿಗೆ ಕಳುಹಿಸುತ್ತೇನೆ ಎಂದು ಸಂಸದ ಪ್ರತಾಪ್‌ ಸಿಂಹ ಗುಡುಗಿದರು.

Advertisement

ನಗರದ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ಬಿಜೆಪಿ ಹಿಂ.ವ. ಮೋರ್ಚಾ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾಜಿಕ ಸಮ್ಮೇಳನ ಸಮಾವೇಶದಲ್ಲಿ ಮಾತನಾಡಿ, ಲಕ್ಷ್ಮಣ್‌ ಅವರು ಹೋದಲ್ಲಿ ಬಂದಲ್ಲಿ 47 ವರ್ಷಗಳ ಬಳಿಕ ಒಕ್ಕಲಿಗರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಒಕ್ಕಲಿಗ ಎಂದು ಸರ್ಟಿಫಿಕೆಟ್‌ ಕೊಟ್ಟವರು ಯಾರು? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಯದುವೀರ್‌ ಮಂತ್ರಿ ಆಗಲಿದ್ದಾರೆ: ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಬಿಜೆಪಿ ಗೆದ್ದರೆ ಯದುವೀರ್‌ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ದೊರೆಯಲಿದೆ ಎಂದು ಪ್ರತಾಪ್‌ ಸಿಂಹ ಭವಿಷ್ಯ ನುಡಿದರು. ಮಹಾರಾಜರಿಗೆ ಗೌರವ ಕೊಡದ ವ್ಯಕ್ತಿ ಇಂದು ಕಾಂಗ್ರೆಸ್‌ ಅಭ್ಯರ್ಥಿ ಆಗಿದ್ದಾರೆ ಎಂದ ಅವರು, ದೇಶಕ್ಕೆ ಮೋದಿ ಬೇಕು, ಮೈಸೂರಿಗೆ ಯದುವೀರ್‌ ಬೇಕು ಎಂದು ಹೇಳಿದರು. ಶಾಸಕ ಟಿ.ಎಸ್‌ ಶ್ರೀವತ್ಸ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next