Advertisement

ಬಂಗಾರಪೇಟೆ: ಕುಡಿದ ಬಳಿಕ ಜಗಳ; ನಶೆಯಲ್ಲಿದ್ದ ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ

03:00 PM Apr 24, 2022 | Team Udayavani |

ಬಂಗಾರಪೇಟೆ: ಇಡೀ ದಿನ ಸ್ನೇಹಿತರೊಂದಿಗೆ ಗುಂಡು- ತುಂಡು ಪಾರ್ಟಿ ಮಾಡಿ ಕುಡಿತದ ನಶೆ ನೆತ್ತಿಗೇರಿದ ಪರಿಣಾಮ ಶುಕ್ರವಾರ ರಾತ್ರಿ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಕಾರಹಳ್ಳಿ ಸ್ಮಶಾನದ ಬಳಿ ನಡೆದಿದೆ.

Advertisement

ಕೆರೆಕೋಡಿ ಗ್ರಾಮದ ಯುವಕ ಹರೀಶ್‌ (23) ಹತ್ಯೆಯಾದ ಯುವಕ.

ಕೂಲಿ ಕೆಲಸ ಮಾಡುವ ವೆಂಕಟೇಶ್‌ ಮತ್ತು ಶಾಂತಮ್ಮ ದಂಪತಿಯ ಮಗ ಹರೀಶ್‌ ಗಾರೆ ಕೆಲಸ ಮಾಡಿ ಕೊಂಡು ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದ. ಶುಕ್ರವಾರ ಬೆಳಗ್ಗೆ ಮನೆಯಿಂದ ಹೊರಟು ಆರು ಮಂದಿ ಸ್ನೇಹಿತರು ಜತೆಗೂಡಿ ಸ್ಮಶಾನಕ್ಕೆ ಪಾತ್ರೆಗಳನ್ನು ತೆಗೆದುಕೊಂಡು ಹೋಗಿ ಅಡುಗೆ ತಯಾರಿಸಿ ಪಾರ್ಟಿ, ಮೋಜು ಮಸ್ತಿ ಮಾಡಿದ್ದಾರೆ. ಸಂಜೆ 4 ಗಂಟೆಗೆ ಮನೆಗೆ ಪಾತ್ರೆ ಕಳುಹಿಸಿದ್ದಾರೆ. ರಾತ್ರಿ ವೇಳೆಗೆ ಸ್ನೇಹಿತರ ನಡುವೆ ಜಗಳವಾಗಿ ಕೃತ್ಯ ನಡೆದಿದೆ ಎನ್ನಲಾಗಿದೆ.

ರಾತ್ರಿ ತಾಯಿ ಶಾಂತಮ್ಮ ಮಗ ಮನೆಗೆ ಬಂದಿಲ್ಲವೆಂದು ಹರೀಶ್‌ ಮೊಬೈಲ್‌ಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್ ಆಗಿದೆ. ಶನಿವಾರ ಬೆಳಗ್ಗೆ ಸ್ಮಶಾನದಲ್ಲಿ ಕೊಲೆಯಾಗಿರುವ ಮಾಹಿತಿ ಸಿಕ್ಕಿದೆ. ಇತ್ತೀಚಿಗೆ ಹರೀಶ್‌ ಗ್ರಾಮದಲ್ಲಿ ಬೈಕ್‌ ಓಡಿಸುವಾಗ ಗ್ರಾಮಸ್ಥರ ಜತೆ ಕಿರಿಕ್‌ ಆಗಿ ಸ್ನೇಹಿತರು ಕೊಲೆ ಬೆದರಿಕೆ ಹಾಕಿದ್ದರು ಎಂದು ಪೋಷಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next