Advertisement

ವಿಷಕಾರಿ ಅಣಬೆ ಸೇವಿಸಿ ಹದಿನೈದು ಮಂದಿ ಅಸ್ವಸ್ಥ

11:06 PM Jul 20, 2019 | Lakshmi GovindaRaj |

ಶಿವಮೊಗ್ಗ: ವಿಷಪೂರಿತ ಅಣಬೆ ಸೇವಿಸಿ 15 ಮಂದಿ ಅಸ್ವಸ್ಥರಾದ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ವ್ಯಾಪ್ತಿಯ ಸಂತೆಹಕ್ಲು ಎಂಬಲ್ಲಿ ನಡೆದಿದೆ. ಗ್ರಾಮದ ಹರಿಯಪ್ಪ ಎಂಬುವರು ಈಚೆಗೆ ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಿಂದ ಬಂದಿದ್ದ ಸಂಬಂಧಿ ಕರು ಗ್ರಾಮದಲ್ಲೇ ಉಳಿದಿದ್ದರು.

Advertisement

ಶುಕ್ರವಾರ ರಾತ್ರಿ 5 ಅಣಬೆಯೊಂದಿಗೆ 2 ವಿಷಯುಕ್ತ ಅಣಬೆಯನ್ನೂ ಬಳಸಿ ಸಾಂಬಾರ್‌ ತಯಾರಿಸಿ ಊಟ ಮಾಡಿದ್ದಾರೆ. ಆದರೆ ರಾತ್ರಿ 11ರ ಸುಮಾರಿಗೆ ಎಲ್ಲರೂ ವಾಂತಿ ಮಾಡಲಾರಂಭಿಸಿದ್ದಾರೆ. ತಕ್ಷಣ ಜೆಸಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು.

ಸೂಕ್ತ ಚಿಕಿತ್ಸೆಯಿಂದ ಎಲ್ಲರೂ ಚೇತರಿಸಿಕೊಂಡಿದ್ದು ಶನಿವಾರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಈ ಘಟನೆ ನಡೆದ ಹಿನ್ನೆಲೆಯಲ್ಲಿ ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ತಂಡ ಸಂತೆಹಕ್ಲು ಗ್ರಾಮದ 26 ಮನೆಗಳಿಗೆ ತೆರಳಿ ವಿಷಕಾರಿ ಅಣಬೆ ಕುರಿತಂತೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next