Advertisement

ಯೋಧರ ಮೇಲಿನ ಉಗ್ರ ದಾಳಿ: ಕಾಂಗ್ರೆಸ್‌ ಖಂಡನೆ

12:30 AM Feb 16, 2019 | |

ಕುಂದಾಪುರ: ಪಾಕಿಸ್ಥಾನ ಪ್ರೇರಿತ ಕಾಶ್ಮೀರ ಉಗ್ರನೊಬ್ಬ ಬಾಂಬ್‌ ದಾಳಿ ನಡೆಸಿ 40ಸಿಆರ್‌ಪಿಎಫ್‌ ಯೋಧ‌ರ ಹತ್ಯೆಗೆ ಕಾರಣವಾಗಿರುವ ಘಟನೆಯನ್ನು ಕಾಂಗ್ರೆಸ್‌ ಪಕ್ಷವು ಅತ್ಯುಗ್ರವಾಗಿ ಖಂಡಿಸುತ್ತದೆ. ಈ ಘಟನೆಯು ಕಾಶ್ಮೀರದಲ್ಲಿ ಕಳೆದ 20 ವರ್ಷಗಳಲ್ಲೇ ನಡೆದ ಅತ್ಯಂತ ಭೀಕರ ದಾಳಿಯಾಗಿದೆ.

Advertisement

ಆ ಕಾರಣಕ್ಕಾಗಿ ಜೀವದ ಹಂಗು ತೊರೆದು ದೇಶವನ್ನು ರಕ್ಷಿಸುವ ಯೋಧ‌ರ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಕೇಂದ್ರ ಸರಕಾರ ಈಗಿಂದೀಗಲೇ ಕೈಗೊಳ್ಳಬೇಕು ಎಂದು ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಆಗ್ರಹಿಸಿದರು.

ಅವರು ಶುಕ್ರವಾರ ಕಾಂಗ್ರೆಸ್‌ ಕಚೇರಿ ಇಂದಿರಾ ಪ್ರಿಯದರ್ಶಿನಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಉಗ್ರದಾಳಿ ಘಟನೆಯನ್ನು ಖಂಡಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಗೋಪಾಲ್‌ಕೃಷ್ಣ ಶೆಟ್ಟಿ, ಕೃಷ್ಣದೇವ ಕಾರಂತ, ನಾರಾಯಣ ಆಚಾರ್‌, ವಿನೋದ್‌ ಕ್ರಾಸ್ಟೊ, ಅಬ್ದುಲ್ಲಾ ಕೋಡಿ, ಚಂದ್ರಶೇಖರ ಶೆಟ್ಟಿ, ಧರ್ಮಪ್ರಕಾಶ್‌, ಶೋಭಾ ಸಚ್ಚಿದಾನಂದ, ಅಶೋಕ್‌ ಸುವರ್ಣ, ಕೇಶವ ಭಟ್‌, ಶಿವಾನಂದ ಕೆ., ಜ್ಯೋತಿ ಡಿ. ನಾಯ್ಕ, ಚಂದ್ರಕಾಂತ ಖಾರ್ವಿ, ಹೇಮಾ ಪೂಜಾರಿ, ಅಶ#‌³ಕ್‌ ಅಹಮ್ಮದ್‌, ಗಣೇಶ್‌ ಶೆಟ್ಟಿ, ಕೃಷ್ಣ ಮೊಗವೀರ, ವಿಠuಲ ಕಾಂಚನ್‌, ಅಣ್ಣಯ್ಯ ಪುತ್ರನ್‌, ಸದಾನಂದ ಖಾರ್ವಿ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next