Advertisement

ಹಕ್ಕಿಗಳಿಗೆ ಕಾಳು ನೀರು ಯೋಜನೆ

10:51 PM Apr 08, 2019 | sudhir |

ಉಡುಪಿ: ಬೇಸಿಗೆಯಲ್ಲಿ ನೀರು ಮತ್ತು ಸರಿಯಾದ ಆಹಾರಲ್ಲದೆ ಸಾವಿರಾರು ಅಮೂಲ್ಯ ಪಕ್ಷಿ ಸಂಕುಲ ಆಪಾಯ ಎದುರಿಸುತ್ತಿದೆ. ಈ
ನಿಟ್ಟಿನಲ್ಲಿ ಅವುಗಳ ಸಂತತಿಯನ್ನು ಉಳಿಸಲು ನೀರು ಮತ್ತು ಆಹಾರ ನೀಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜೇಸಿಐ ಕಾರ್ಯಕ್ರಮ ವಿಭಾಗದ ನಿರ್ದೇಶಕ ಸಂದಿಪ್‌ ಕುಮಾರ್‌ ಹೇಳಿದರು.
ಸೇವ್‌ ಬರ್ಡ ಪಕ್ಷಿಗಳಿಗೆ ಕಾಳು ನೀರು ಯೋಜನೆಯನ್ನು ಉದ್ಘಾಟಿಸಿ ಅವರು ಹೇಳಿದರು.
ಜೆಸಿಐ ಉಡುಪಿ ಸಿಟಿ ಇದರ ವತಿಯಿಂದ ಅಜ್ಜರಕಾಡು ಪಾರ್ಕ ನಲ್ಲಿ ಎ.6 ಯುಗಾದಿಯಂದು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೇಸಿ ಅಧ್ಯಕ್ಷ ಜಗದೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಲಯ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಶಕೀರ್‌ ಹಾವಂಜೆ, ಸುಕೇಶ್‌ ಶೆಟ್ಟಿ, ರಾಜಶ್ರೀ, ಸ್ವರ್ಣಶ್ರೀ, ದೀಕ್ಷಿತ್‌, ರಪೀಕ್‌ ಖಾನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next