Advertisement

ಭ್ರೂಣ ಹತ್ಯೆ: ಸ್ಕ್ಯಾನಿಂಗ್‌ ಯಂತ್ರಗಳ ಡಾಟಾ ಅಳಿಸಿ ಹಾಕಿದ ಸೆಂಟರ್‌ಗಳು

11:42 PM Dec 20, 2023 | Team Udayavani |

ಮಂಡ್ಯ: ಸ್ಕ್ಯಾನಿಂಗ್‌ ಯಂತ್ರಗಳಲ್ಲಿರುವ ಡಾಟಾವನ್ನು ಅಳಿಸಿ ಹಾಕಿರುವ ಹಿನ್ನೆಲೆಯಲ್ಲಿ ನಾಗಮಂಗಲ ಪಟ್ಟಣದ ಎರಡು ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಅ ಧಿಕಾರಿಗಳು ಬೀಗ ಜಡಿದಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗವೇ ಇರುವ ಲಕ್ಷ್ಮೀ ಡಯಾಗ್ನೊಸ್ಟಿಕ್‌ ಸೆಂಟರ್‌ ಮತ್ತು ಕಾವೇರಿ ಡಯಾಗ್ನೊàಸ್ಟಿಕ್‌ ಸೆಂಟರ್‌ಗಳ ಮೇಲೆ ಉಪವಿಭಾಗಾಧಿ ಕಾರಿ ನಂದೀಶ್‌ ನೇತೃತ್ವದ ಆರೋಗ್ಯ ಅಧಿಕಾರಿಗಳ ತಂಡ ದಾಳಿ ನಡೆಸಿ ಸೀಜ್‌ ಮಾಡಿದೆ.

Advertisement

ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ವೈದ್ಯರು ಅಲ್ಲಿಂದ ಕಾಲ್ಕಿತ್ತರೆ, ಸಿಬಂದಿ ಗಲಿಬಿಲಿಗೊಂಡಿದ್ದಾರೆ. ಅಧಿ ಕಾರಿಗಳ ಪರಿಶೀಲನೆಗೆ ಸಿಬಂದಿ ಕಳ್ಳಾಟ ಆಡಿದ್ದಾರೆ. ಸಿಸ್ಟಂನಲ್ಲಿದ್ದ ಡಾಟಾ ಅಳಿಸಿ ಹಾಕುವ ಮೂಲಕ ಅಧಿಕಾರಿಗಳ ಕಣ್ತಪ್ಪಿಸಲು ಯತ್ನ ನಡೆಸಿದ್ದಾರೆ. ಅಲ್ಲದೆ, ಅಧಿಕಾರಿಗಳಿಗೆ ಸಮರ್ಪಕವಾದ ದಾಖಲೆ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕಾವೇರಿ, ಲಕ್ಷ್ಮೀ ಡಯಾಗ್ನೊಸ್ಟಿಕ್‌ ಸೆಂಟರ್‌ನಲ್ಲಿ 2 ವರ್ಷಗಳ ಮಾಹಿತಿ ಅಳಿಸಿ ಹಾಕಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ದೊರೆತಿದೆ. ಅಲ್ಲದೆ, ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರ (ದುರ್ಬಳಕೆ ಮತ್ತು ತಡೆ) ಕಾಯ್ದೆಯ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ 2 ಸ್ಕ್ಯಾನಿಂಗ್‌ ಸೆಂಟರ್‌ಗಳನ್ನು ಬೀಗ ಜಡಿದು ಸೀಜ್‌ ಮಾಡಿದ್ದಾರೆ. ಜತೆಗೆ ಸ‌ಮರ್ಪಕ ಉತ್ತರ ನೀಡುವಂತೆ ನೋಟಿಸ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next