Advertisement

ಸೊರಬದಲ್ಲಿ ವಿಜೃಂಭಣೆಯ ಶ್ರೀ ವೀರಭದ್ರೇಶ್ವರಸ್ವಾಮಿ ಜಯಂತ್ಯುತ್ಸವ

02:07 PM Sep 06, 2022 | Kavyashree |

ಸೊರಬ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

Advertisement

ಮುರುಘಾಮಠದ ಆವರಣದಿಂದ ಆರಂಭವಾದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಭಾವಚಿತ್ರದ ಮೆರವಣಿಗೆ ಚಿಕ್ಕಪೇಟೆ ಮಾರ್ಗವಾಗಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಮುಖ್ಯರಸ್ತೆ ನಂತರ ಸಭಾ ಕಾರ್ಯಕ್ರಮ ನಡೆಯುವ ಡಾ. ರಾಜ್ ಕಲಾಕ್ಷೇತ್ರದ ವರೆಗೆ ನಡೆಯಿತು.

ಮೆರವಣಿಗೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಹರಳಹಳ್ಳಿಯ ಶ್ರೀ ಕಾಟಮ್ ಲಿಂಗೇಶ್ವರ ಸ್ವಾಮಿ ವೀರಗಾಸೆ ತಂಡದ ಗುಗ್ಗಳ ಕಾರ್ಯಕ್ರಮ, ಬೈಕ್ ರ್ಯಾಲಿ ಹಾಗೂ ಝಾಂಜ್ ತಂಡ ಮೆರವಣಿಗೆಗೆ ಮೆರುಗು ತಂದವು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಪಿ. ಈರೇಶ್ ಗೌಡ, ತಾಲೂಕು ಅಧ್ಯಕ್ಷ ಸಂದೀಪ ಗೌಡ ಯಲವಳ್ಳಿ, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ತಾಪಂ ಮಾಜಿ ಸದಸ್ಯ ಸುನೀಲ್ ಗೌಡ, ಜೆ.ಎಸ್. ಚಿದಾನಂದ ಗೌಡ ಜೇಡಗೇರಿ, ನಾಗರಾಜ ಗುತ್ತಿ, ನವೀನ್ ಗುತ್ತಿ, ಆಶೀಕ್ ನಾಗಪ್ಪ, ಹರ್ಷಾ, ಡಿ. ಶಿವಯೋಗಿ, ಪ್ರದೀಪ್ ಬಾಡದಬೈಲು ಸೇರಿದಂತೆ ವೀರಶೈವ ಸಮಾಜದ ಮುಖಂಡರು ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next