Advertisement

8 ರಿಂದ ಮುರುಘಾ ಮಠದಲ್ಲಿ ವೈಚಾರಿಕ ಹಬ್ಬ

06:05 PM Oct 02, 2021 | Team Udayavani |

 ಚಿತ್ರದುರ್ಗ: ಮುರುಘಾ ಮಠದಲ್ಲಿ ಅ. 8 ರಿಂದ 18 ರವರೆಗೆ ಶರಣ ಸಂಸ್ಕೃತಿ ಉತ್ಸವ ಹಾಗೂ ಡಾ| ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸವ ನಡೆಯಲಿದೆ. ಅದರ ನಿಮಿತ್ತ ಲೋಗೋ ಮತ್ತು ಆಹ್ವಾನಪತ್ರಿಕೆಯನ್ನು ಶುಕ್ರವಾರ ಡಾ| ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅ. 8 ರಂದು ಬೈಕ್‌ ರ್ಯಾಲಿ, ರಾಜ್ಯ ಮಟ್ಟದ ಜಾನಪದ ಕಲೆಗಳ ಸ್ಪರ್ಧೆ, ಚಲನಚಿತೋÅತ್ಸವ ಉದ್ಘಾಟನೆ, ರಾಷ್ಟ್ರ ಮಟ್ಟದ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಹೊನಲುಬೆಳಕಿನ ವಾಲಿಬಾಲ್‌ ಪಂದ್ಯಾವಳಿ ಆಯೋಜಿಸಲಾಗಿದೆ. ರಾಷ್ಟ್ರ ಮಟ್ಟದ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಇಂಡಿಯನ್‌ ಬ್ಯಾಂಕ್‌ ಚೆನ್ನೈ, ಇಂಡಿಯನ್‌ ರೈಲ್ವೆ ದೆಹಲಿ, ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ ತಮಿಳುನಾಡು, ಒಎನ್‌ಜಿಸಿ ಗುವಾಹಟಿ, ಹರಿಯಾಣ ರಾಜ್ಯ ತಂಡ, ಬಿಪಿಸಿಎಲ್‌ ಕೊಚ್ಚಿನ್‌, ಕೆಎಸ್‌ಇಟಿ ತಂಡ ಕೇರಳ ಮತ್ತು ಕರ್ನಾಟಕ ತಂಡ ಬೆಂಗಳೂರು ಹಾಗೂ ಮಹಿಳೆಯರ ತಂಡಗಳಾದ ಇಂಡಿಯನ್‌ ರೈಲ್ವೆ ದೆಹಲಿ, ತಮಿಳುನಾಡು ತಂಡ, ಕೆಎಸ್‌ಇಟಿ ಕೇರಳ, ಕರ್ನಾಟಕ ತಂಡ ಬೆಂಗಳೂರು, ಕೇರಳ ಪೊಲೀಸ್‌ ತಂಡ, ಎಸ್‌ ಆರ್‌ಎಂ ಯೂನಿವರ್ಸಿಟಿ ತಂಡ ತಮಿಳುನಾಡು ತಂಡಗಳು ಭಾಗವಹಿಸಲಿವೆ. ರಾಷ್ಟ್ರ ಮಟ್ಟದ ಆಹಾರಮೇಳ, ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಮತ್ತು ಯೂತ್‌ ಫೆಸ್ಟಿವಲ್‌ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಅ. 9 ರಂದು ರಾಜ್ಯ ಮಟ್ಟದ ಕೋಲಾಟ ಸ್ಪರ್ಧೆ, 10 ರಂದು ದಕ್ಷಿಣ ರಾಜ್ಯಗಳ ಮೌಂಟೆನ್‌ ಬೈಕ್‌ ರ್ಯಾಲಿ, ರಾಜ್ಯ ಮಟ್ಟದ ಭಜನೆ ಸ್ಪರ್ಧೆ, 11 ರಂದು ಚಿತ್ರದುರ್ಗ ಸ್ಥಳೀಯ ಮಹಿಳೆಯರ ಕ್ರೀಡಾಕೂಟ, ವಾಲಿಬಾಲ್‌ ಪಂದ್ಯಾವಳಿ, 12 ರಂದು ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆ, ಸ್ವಾತಂತ್ರÂ ಅಮೃತ ಮಹೋತ್ಸವ, ಬಸವ ಕೇಂದ್ರ ಪದಾಧಿ ಕಾರಿಗಳ ಸಮಾವೇಶ, ಕ್ರೀಡಾಕೂಟ ಮತ್ತು ಆಹಾರ ಮೇಳ ಸಮಾರೋಪ ಸಮಾರಂಭಗಳು ನಡೆಯಲಿವೆ. 13 ರಂದು ಸಾಲುಮರದ ತಿಮ್ಮಕ್ಕ ಬಸವತತ್ವ ಧ್ವಜಾರೋಹಣ ನೆರವೇರಿಸುವರು. ಸಹಜ ಶಿವಯೋಗ, ಕೃಷಿಮೇಳ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ಮುರುಘಾಶ್ರೀ ಹಾಗು ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿ ಪ್ರದಾನ, 14 ರಂದು ಮಹಿಳಾಗೋಷ್ಠಿ, ಸಿಪಿಆರ್‌ ತರಬೇತಿ ಆರೋಗ್ಯ ಮೇಳ ಸಮಾರೋಪ, ಯುವಮೇಳ, 15 ರಂದು ಸಹಜ ಶಿವಯೋಗ, ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾಮೇಳ, ಮಕ್ಕಳ ಮೇಳ, 16 ರಂದು ಸಹಜ ಶಿವಯೋಗ, ಜಯದೇವ ಜಂಗೀಕುಸ್ತಿ, ಶರಣ ದಂಪತಿಗಳಿಗೆ ಗೌರವಾರ್ಪಣೆ, ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ. 17 ರಂದು ಸಹಜ ಶಿವಯೋಗ, ಲಿಂಗೈಕ್ಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಶ್ರೀಗಳ 28ನೇ ಸ್ಮರಣೋತ್ಸವ, ಪಂಡಿತ ರಾಜೀವ್‌ ತಾರಾನಾಥ್‌ ಮತ್ತು ಡಾ| ಕೆ. ಕಸ್ತೂರಿ ರಂಗನ್‌ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ, 18 ರಂದು ವಿಶ್ವ ಕಲ್ಯಾಣಾರ್ಥವಾಗಿ ಸಾವಿರಾರು ಮಠಾ ಧೀಶರಿಂದ ಲಿಂಗಪೂಜೆ, ಸರ್ವ ಜನಾಂಗದ ಮಠಾಧಿಧೀಶರ ಸಮಾವೇಶ ಹಾಗೂ ಸಂಜೆ 5:30 ಗಂಟೆಗೆ ಡಾ| ಶಿವಮೂರ್ತಿ ಮುರುಘಾ ಶರಣರಿಗೆ ಗುರುವಂದನೆ ನಡೆಯಲಿದೆ. 19 ರಂದು ಮಧ್ಯಾಹ್ನ 3 ಗಂಟೆಗೆ ಉಳವಿಯ ಶಾಖಾ ಮಠವಾದ ಮುರುಘಾ ಮಠದಲ್ಲಿ ಮಠಾಧಿಧೀಶರ ಚಿಂತನ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿಯ ಖಜಾಂಚಿ ಎ.ಜೆ. ಪರಮಶಿವಯ್ಯ, ಪದಾ ಧಿಕಾರಿಗಳಾದ ಎಲ್‌.ಬಿ. ರಾಜಶೇಖರ್‌, ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಪಟೇಲ್‌ ಶಿವಕುಮಾರ್‌, ಮಹಡಿ ಶಿವಮೂರ್ತಿ, ಕೆಇಬಿ ಷಣ್ಮುಖಪ್ಪ, ವಿಶ್ವನಾಥಯ್ಯ ಮತ್ತಿತರರು ಇದ್ದರು.

ಪ್ರಶಸ್ತಿ ಪ್ರದಾನ
ಮುರುಘಾ ಮಠದಿಂದ ನೀಡಲಾಗುವ ಪ್ರಸಕ್ತ ಸಾಲಿನ ಮುರುಘಾಶ್ರೀ ಪುರಸ್ಕಾರಕ್ಕೆ ನಾಡಿನ ಐವರು ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಶರಣ ಸಂಸ್ಕೃತಿ ಉತ್ಸವದಲ್ಲಿ ಅ.13ರಂದು ಸಂಜೆ 6:30ಕ್ಕೆ ಮುರುಘಾ ಮಠದ ಅನುಭವ ಮಂಟದಪಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತರ ಕಿರು ಪರಿಯಯ ಇಂತಿದೆ.

ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಅವಿರತ ಶ್ರಮಿಸುತ್ತಿರುವ ಮಹಾಂತ ರುದ್ರೇಶ್ವರ ಸ್ವಾಮಿಗಳು ಈವರೆಗೆ 6 ಸಾವಿರಕ್ಕೂ ಅ ಧಿಕ ಜೋಡಿಗಳ ದಾಂಪತ್ಯ ಬದುಕಿಗೆ ಆಸರೆಯಾಗಿದ್ದಾರೆ. ಹೆಬ್ಟಾಳು ಗ್ರಾಮದ ಸುತ್ತ ಹಬ್ಬ, ಜಾತ್ರೆ ನೆಪದಲ್ಲಿ ನಡೆಯುತ್ತಿದ್ದ ಪ್ರಾಣಿಬಲಿಯನ್ನು ಜನರ ಮನವೊಲಿಸಿ ನಿಲ್ಲಿಸಿದ ಶ್ರೀಗಳು, ಬಸವ ಪುತ್ಥಳಿ ರಥೋತ್ಸವ, ಕತ್ತಲಿನಿಂದ ಬೆಳಕಿನೆಡೆಗೆ, ಮನೆಯಲ್ಲಿ ಮಹಾಮನೆ ಮುಂತಾದ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಧರ್ಮ ಜಾಗೃತಿ ಮೂಡಿಸುತ್ತ ಬಂದಿದ್ದಾರೆ. ಗ್ರಾಮೀಣ ಮಕ್ಕಳಿಗೆ ಶಿಕ್ಷಣ, ಗೋವುಗಳ ಸಂರಕ್ಷಣೆಗಾಗಿ ಗೋಶಾಲೆ ನಿರ್ಮಾಣ, ಸ್ವತಃ ಕೃಷಿಕರಾಗಿ ಕೃಷಿಯಲ್ಲಿ ನವೀನ ಪದ್ಧತಿಗಳನ್ನು ಅನುಸರಿಸುತ್ತಾ ಸುತ್ತಲಿನ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

Advertisement

ರವೀಂದ್ರ ಭಟ್‌ ಐನಕೈ
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಐನಕೈ ಗ್ರಾಮದ ರವೀಂದ್ರ ಭಟ್‌, ಸಂಯುಕ್ತ ಕರ್ನಾಟಕ,
ಉದಯವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ ಪ್ರಸ್ತುತ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ. ಇವರೇ ಬರಮಾಡಿಕೊಂಡ ಬರ, ಹೆಜ್ಜೆನು, ಬದುಕು ಮರದ ಮೇಲೆ, ಮೂರನೇ ಕಿವಿ,
ಸಂಪನ್ನರು, ಅಕ್ಷಯ ನೇತ್ರ, ಸಹಸ್ರಪದಿ ಮತ್ತಿತರೆ ಕೃತಿಗಳನ್ನು ರಚಿಸಿದ್ದಾರೆ. ಕಾರ್ಯನಿರತ ಪತ್ರಕರ್ತರ ಪ್ರಶಸ್ತಿ, ಮಹಾತ್ಮ ಗಾಂಧಿ ಪ್ರಶಸ್ತಿ, ಚರಕ ಪ್ರಶಸ್ತಿ, ಎಚ್‌.ಎಸ್‌.ಕೆ. ಪ್ರಶಸ್ತಿ,ಕೆಂಪೇಗೌಡ ಪ್ರಶಸ್ತಿ, ಪತ್ರಿಕೋದ್ಯಮ ಪ್ರಶಸ್ತಿಗಳು ಲಭಿಸಿವೆ.

ಡಾ| ಅಮ್ಜಾದ್‌ ಹುಸೇನ್‌

ವಿದ್ಯೆ ಮಾತ್ರವೇ ನಮ್ಮನ್ನು ಕಾಪಾಡಬಲ್ಲದು ಎಂದು ನಂಬಿದವರು ಡಾ| ಅಮ್ಜಾದ್‌ ಹುಸೇನ್‌. ಶಿಕ್ಷಕ ತರಬೇತಿ ಪಡೆದು ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯದ ಗೀಳನ್ನು ಹೊಂದಿ ವಿಶೇಷವಾಗಿ ಮಕ್ಕಳ ಸಾಹಿತ್ಯ ರಚನೆಗೆ ಒತ್ತು ನೀಡುತ್ತಾ ಈವರೆಗೆ 51 ಕವನ ಸಂಕಲನಗಳು, 37ಕ್ಕು ಹೆಚ್ಚು ಗದ್ಯ ಕೃತಿಗಳನ್ನು ಹೊರತಂದಿದ್ದಾರೆ. ಸಾವಿರಾರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡುತ್ತ, “ಮದರಸಾ’ವನ್ನು ತೆರೆದು ಸಮಾಜದ ಬಡ, ಅನಾಥ ಮಕ್ಕಳಿಗೆ ಶಿಕ್ಷಣ ದಾಸೋಹ ನೀಡಿದ್ದಾರೆ. ಗುಲ್ಬರ್ಗಾ ಹಾಗು ಜೆರುಸಲೇಮ್‌ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ ಪದವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

ಯುಗಧರ್ಮ ರಾಮಣ್ಣ

ಸಾವಿರಾರು ತ್ರಿಪದಿ, ವಚನ, ಲಾವಣಿಗಳನ್ನು ಹಾಡುವ ಆಶುಕವಿ ಯುಗಧರ್ಮ ರಾಮಣ್ಣ, ಗ್ರಾಮ್ಯ ಸಿರಿಯನ್ನೇ ನೆಲೆಯಾಗಿಸಿಕೊಂಡ ದೇಸಿ ಪದಶಕ್ತಿಯ ಶಬ್ದಗಾರುಡಿಗ. ದಾವಣಗೆರೆ ಜಿಲ್ಲೆಯ ಸಿದ್ಧನಮಠ ಗ್ರಾಮದ ಕೃಷಿಕ ಕೆಂಚಪ್ಪ ಮತ್ತು ಹುಚ್ಚಮ್ಮ ದಂಪತಿ ಪುತ್ರರಾಗಿದ್ದಾರೆ. ಯುಗಧರ್ಮ ತತ್ವಪದಗಳು, ಯುಗಧರ್ಮ ತ್ರಿಪದಿ, ಕನ್ನಡಮ್ಮನ ತೇರು, ವಚನ ಧರ್ಮ ಮತ್ತು ತೋಚಿದ್ಗೀಚು ಎಂಬ 5 ಕೃತಿಗಳನ್ನು ರಚನೆ ಮಾಡಿದ್ದಾರೆ. ನಾಡಿನೆಲ್ಲೆಡೆ ಸುತ್ತುತ್ತಾ ಸುಮಾರು 13,500ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹೊಸದುರ್ಗ ತಾಲೂಕಿನ ಬ್ರಹ್ಮವಿದ್ಯಾನಗರದಲ್ಲಿ “ದಡ್ರಪದ ವಿಶ್ವವಿದ್ಯಾಲಯ’ವನ್ನು ಕಟ್ಟಿದ್ದಾರೆ.

ಎಸ್‌. ನಾಗರತ್ನಂ
ತಮಿಳುನಾಡಿನ ಮಧುರೈನ ನಾಗರತ್ನಂ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ನಾಡಿನಾದ್ಯಂತ ಪ್ರಚಾರ ಮಾಡಲು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. 1990ರಲ್ಲಿ ವೀರಶೈವ ಜಂಗಮ ಎಂದು ಹೆಸರಿದ್ದ ಸಮುದಾಯವನ್ನು ವೀರಶೈವ ಮಹಾಸಭಾ ಎಂದು ನಾಮಕರಣ ಮಾಡಿಸಿ ಲಿಂಗಾಯತದ ಅನೇಕ ಒಳಪಂಗಡಗಳನ್ನು ಒಂದೆಡೆ ಸೇರಿಸಿ ದೊಡ್ಡ ಸಮುದಾಯ ಎಂಬುದನ್ನು ಸಾಬೀತುಪಡಿಸಿದರು. ತಮಿಳುನಾಡಿನಲ್ಲಿ 22ಕ್ಕೂ ಹೆಚ್ಚು ಲಿಂಗಾಯತ ಸಮುದಾಯದ ಘಟಕಗಳನ್ನು ಸ್ಥಾಪಿಸಿ ನೋಂದಣಿ ಮಾಡಿಸಿ 30 ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next