Advertisement

ನಡು ರಸ್ತೆಯಲ್ಲೇ ಪ್ರಾಧ್ಯಾಪಕಿ ಮೇಲೆ ಹಲ್ಲೆ ನಡೆಸಿ ಎಳೆದೊಯ್ದು ದರೋಡೆ: ವಿಡಿಯೋ ವೈರಲ್

02:52 PM Mar 16, 2023 | Team Udayavani |

ಚೆನ್ನೈ: ನಡು ರಸ್ತೆಯಲ್ಲೇ ಮಹಿಳಾ ಪ್ರಾಧ್ಯಾಪಕಿಯೊಬ್ಬರ ಮೇಲೆ ಹಲ್ಲೆ ನೆಡೆಸಿ ಎಳೆದುಕೊಂಡು ಹೋಗಿ ದರೋಡೆಗೈದ ಘಟನೆ ತಮಿಳುನಾಡಿನ ತಿರುಚಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಅಣ್ಣಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೀತಾಲಕ್ಷ್ಮಿ( 53) ಗಾಯಗೊಂಡ ಮಹಿಳೆ. ಇತ್ತೀಚೆಗೆ ಸೀತಾಲಕ್ಷ್ಮೀ  ಶಾಲೆಯ ಬಳಿ ನಡೆದುಕೊಂಡು ಹೋಗುವ ವೇಳೆ ವ್ಯಕ್ತಿಯೊಬ್ಬ ಮರದ ಹಲಗೆಯಿಂದ ಹಲ್ಲೆ ಮಾಡಿದ್ದಾನೆ. ಏಟು ತಿಂದ ಪರಿಣಾಮ ಸೀತಾಲಕ್ಷ್ಮೀ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ.

ಆ ಬಳಿಕ ಆರೋಪಿ ಸೀತಾಲಕ್ಷ್ಮೀ ಅವರನ್ನು ರಸ್ತೆಯಲ್ಲೇ ಎಳೆದುಕೊಂಡು ಹೋಗಿ ಅವರ ಸ್ಕೂಟಿಯ ಕೀಯನ್ನು ಪಡೆದುಕೊಂಡು ಮೊಬೈಲ್‌ ಫೋನ್‌ ಎಳೆದುಕೊಂಡು ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಅಮೆರಿಕಾದ ಜಿಮ್‌ ನಲ್ಲಿ ವರ್ಕೌಟ್‌ ಮಾಡುವಾಗ ಪಂಜಾಬಿ ನಟನ ಮೇಲೆ ಚೂರಿಯಿಂದ ದಾಳಿ

ಈ ಕುರಿತು ಗಾಯಾಳು ಸೀತಾಲಕ್ಷ್ಮಿ ಅವರ ದೂರಿನ ಆಧಾರದ ಮೇಲೆ ಪೊಲೀಸರು ತಮಿಳುನಾಡಿನ ಪಜಮನಾರಿ ಮೂಲದ ಸೆಂಥಿಲ್ ಕುಮಾರ್ ಅವರನ್ನು ಬಂಧಿಸಿದ್ದಾರೆ.

Advertisement

ಪೊಲೀಸರು ಸೆಂಥಿಲ್‌ ಕುಮಾರ್‌ ನನ್ನು ಬಂಧಿಸಲು ತೆರಳುವಾಗ ಆತ ಪೊಲೀಸರಿಂದ ತಪ್ಪಿಸುವ ಭರದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗಿ ಅಪಘಾತ ಮಾಡಿಕೊಂಡಿದ್ದಾನೆ. ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸೀತಾಲಕ್ಷ್ಮೀ ಅವರನ್ನು ಎಳೆದುಕೊಂಡು ಹೋಗುವ ವಿಡಿಯೋ ವೈರಲ್‌ ಆಗಿದ್ದು, ಸಾರ್ವಜನಿಕವಾಗಿ ಈ ರೀತಿಯ ವರ್ತನೆ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.‌

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next