Advertisement

ಹೇಮಗುಡ್ಡದ ಬಳಿ ರಸ್ತೆ ಅಪಘಾತದಲ್ಲಿ ಹೆಣ್ಣು ಚಿರತೆ ಸಾವು

03:36 PM Jun 05, 2020 | keerthan |

ಗಂಗಾವತಿ: ತಾಲ್ಲೂಕಿನ ಹೇಮಗುಡ್ಡದ ಹತ್ತಿರ ರಸ್ತೆ ಅಪಘಾತದಲ್ಲಿ ಐದು ವರ್ಷದ ಹೆಣ್ಣು ಚಿರತೆಯೊಂದು ಸ್ಥಳದಲ್ಲಿ ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ ಜಾವ ಜರುಗಿದೆ.

Advertisement

ಹೇಮಗುಡ್ಡ ಗ್ರಾಮದ ಹೊರವಲಯದ ಗಿಣಿಗೇರಾ ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಘಟನೆ ಜರುಗಿದ್ದು ಅಪಘಾತದಲ್ಲಿ ಅಪರಿಚಿತ ವಾಹನಯೊಂದು ಡಿಕ್ಕಿ ಹೊಡೆದ ಪರಿಣಾಮ ಐದು ವರ್ಷದ‌ ಹೆಣ್ಣು ಚಿರತೆ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಚಿರತೆಯನ್ನು ವಡ್ಡರಹಟ್ಟಿ ನರ್ಸರಿಗೆ ರವಾನೆ ಮಾಡಲಾಗಿದ್ದು ವೈದ್ಯಕೀಯ ಪರೀಕ್ಷೆ ನಂತರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ಡಿವೈಆರ್ ಎಫ್ ರಾಮಣ್ಣ ಉದಯವಾಣಿ ಗೆ ತಿಳಿಸಿದ್ದಾರೆ.

ಕಿಷ್ಕಿಂದಾ ಅಂಜನಾದ್ರಿ ಪರ್ವತ ಸೇರಿ ಹೇಮಗುಡ್ಡ ಏರಿಯಾ ಏಳು ಗುಡ್ಡದ ಪ್ರದೇಶವಾಗಿರುವುದರಿಂದ ಇಲ್ಲಿ ಚಿರತೆ, ಕರಡಿ, ಮೊಲ, ತೋಳ, ಕಾಡು ಹಂದಿ ಹಾಗು ಅಪರೂಪದ ಪ್ರಾಣಿ ಪಕ್ಷಿಗಳಿದ್ದು ಅರಣ್ಯ ಇಲಾಖೆ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆ ನಿಧನವಾಗಿ ವಾಹನ ಚಾಲನೆ ಮಾಡಿ ಇಲ್ಲಿ‌ ಪ್ರಾಣಿಗಳಿವೆ ಎಂಬ ಎಚ್ಚರಿಕೆ ನಾಮಫಲಕ ಹಾಕಿದ್ದರೂ ವಾಹನ ಚಾಲಕರು ನಿರ್ಲಕ್ಷ್ಯ ವಹಿಸಿ ವಾಹನ ಚಾಲನೆ ಮಾಡುವುದರಿಂದ ಪ್ರಾಣಿಗಳು ಸಾವನ್ನಪ್ಪುವ ಘಟನೆಗಳು ಇತ್ತಿಚೆಗೆ ಹೆಚ್ಚು ಸಂಭವಿಸುತ್ತಿವೆ.

ಗಂಗಾವತಿ ತಾಲೂಕಿನ ಗುಡ್ಡಪ್ರದೇಶದಲ್ಲಿ ವಾಹನಗಳ ವೇಗದ ಮಿತಿ ಕಡ್ಡಾಯ ಮಾಡುವಂತೆ ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next