Advertisement

ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣ: ಒಂದೂವರೆ ತಿಂಗಳ ಹಿಂದೆಯೇ ಸಂಚು

12:51 AM Aug 21, 2019 | Lakshmi GovindaRaj |

ಬೆಂಗಳೂರು: ಸ್ನೇಹಿತನ ಜತೆ ಸೇರದಂತೆ ಪದೇ ಪದೆ ಎಚ್ಚರಿಕೆ ನೀಡುತ್ತಿದ್ದ ತಂದೆ, ಬಟ್ಟೆ ವ್ಯಾಪಾರಿ ಜೈಕುಮಾರ್‌ ಹತ್ಯೆಗೆ ಒಂದೂವರೆ ತಿಂಗಳ ಹಿಂದೆಯೇ ಪುತ್ರಿ ಹಾಗೂ ಆಕೆಯ ಪ್ರಿಯಕರ ಸಂಚು ರೂಪಿಸಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಆರೋಪಿ ಪ್ರವೀಣ್‌ ಜತೆ ಓಡಾಡುತ್ತಿದ್ದ ಪುತ್ರಿಯನ್ನು ನಿಯಂತ್ರಣದಲ್ಲಿಡುವ ಸಲುವಾಗಿ ಆಕೆಯಿಂದ 2-3 ಬಾರಿ ಮೊಬೈಲ್‌ ಕಸಿದುಕೊಂಡು ಎಚ್ಚರಿಕೆ ನೀಡಿದ್ದರು. ಆದರೂ ಆಕೆ ಟ್ಯೂಷನ್‌ಗೆ ಹೋಗುವ ನೆಪದಲ್ಲಿ ಆತನನ್ನು ಭೇಟಿಯಾಗುತ್ತಿದ್ದಳು. ಈ ವಿಚಾರ ತಿಳಿದ ಜೈಕುಮಾರ್‌ ಪುತ್ರಿಗೆ ಹೊಡೆದಿದ್ದರು.

ಈ ವಿಚಾರವನ್ನು ಸ್ನೇಹಿತ ಪ್ರವೀಣ್‌ ಜತೆ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಅದರಿಂದ ಆಕ್ರೋಶಗೊಂಡ ಆರೋಪಿ, “ನೀನು ಸಹಕಾರ ನೀಡಿದರೆ ನಿಮ್ಮ ತಂದೆಗೆ ಒಂದು ಗತಿ ಕಾಣಿಸುತ್ತೇನೆ’ ಎಂದು ಪ್ರಚೋದಿಸಿದ್ದ. ಈ ಮಧ್ಯೆ ಮಾರ್ಗ ಮಧ್ಯೆ ಸಿಕ್ಕಿದ್ದ ಪ್ರವೀಣ್‌ಗೆ ಜೈಕುಮಾರ್‌ ಪುತ್ರಿ ಜತೆ ಓಡಾಡದಂತೆ ತಾಕೀತು ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ ಹಿಂದೆ ಆರೋಪಿಗಳು ಪರಸ್ಪರ ಭೇಟಿಯಾದಾಗ ಕೊಲೆಗೆ ಸಂಚು ರೂಪಿಸಿದ್ದರು. ಆದರೆ, ಸೂಕ್ತ ಸಮಯ ಸಿಕ್ಕಿರಲಿಲ್ಲ. ಆ. 17ರಂದು ತಾಯಿ ಮತ್ತು ಸಹೋದರ ಪುದುಚೇರಿಗೆ ಹೋಗುತ್ತಾರೆ ಎಂಬ ಮಾಹಿತಿ ತಿಳಿದ ಆಕೆ, ಪ್ರವೀಣ್‌ಗೆ ತಿಳಿಸಿದ್ದಾಳೆ. ಬಳಿಕ ಒಂದೇ ದಿನದಲ್ಲಿ ಹೇಗೆ ಕೃತ್ಯ ಎಸಗಬೇಕು ಎಂಬ ಬಗ್ಗೆ ಸಂಚು ರೂಪಿಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next